ಅಪ್ಪಂದಿರ ದಿನದ ವಿಶೇಷ : ಸಂಚಿಕೆ -3 : ಬರಹ : ನಿನಾದ್ ಕೈರಂಗಳ, 8ನೇ ಶೌರ್ಯ ತರಗತಿ
Monday, June 16, 2025
Edit
ಅಪ್ಪಂದಿರ ದಿನದ ವಿಶೇಷ : ಸಂಚಿಕೆ -3
ಬರಹ : ನಿನಾದ್ ಕೈರಂಗಳ
8ನೇ ಶೌರ್ಯ ತರಗತಿ
ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಎಲ್ಲಾ ದಿನಗಳು ವಿಶೇಷವೇ... ಹಾಗೇ ಜೂನ್ 15 - ವಿಶ್ವ ಅಪ್ಪಂದಿರ ದಿನವೆಂದು ಆಚರಿಸಲಾಗುತ್ತಿದೆ. ಆಸರೆ ಹಾಗೂ ಸ್ಪೂರ್ತಿಯಾಗುವ ತಂದೆಯನ್ನು ಸ್ಮರಿಸುವ ದಿನ. ಮಕ್ಕಳ - ಜಗಲಿಯಲ್ಲಿ ತನ್ನ ಅಪ್ಪನ ಕುರಿತ ಮಾತುಗಳು.... ಮಕ್ಕಳು ಹೇಳಿದ ಪ್ರೀತಿಯ ನುಡಿಗಳು ಇಲ್ಲಿವೆ....
ಎಲ್ಲರಿಗೂ ನಮಸ್ತೆ ನಾನು ನಿನಾದ್ ಕೈರಂಗಳ 15-06-2025 ರಂದು ಅಪ್ಪಂದಿರ ದಿನಾಚರಣೆ. ಈ ದಿನ ಅಪ್ಪನ ದಿನಾಚರಣೆಯಾದ್ದರಿಂದ ಇವತ್ತು ನನ್ನ ಅಪ್ಪನಿಗೆ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಿದ್ದೇನೆ.
ನಾನು ಚಿಕ್ಕವನಿದ್ದಾಗಿನಿಂದಲೇ ನನಗೆ ನನ್ನ ಅಪ್ಪನೇ ಎಲ್ಲ. ನಾನು 6 ತಿಂಗಳ ಮಗುವಾಗಿದ್ದಾಗ ನನ್ನನ್ನು ಅಡಿಕೆಯ ಹಾಳೆಯಲ್ಲಿ ಎತ್ತಿ ಹಾಡು ಹೇಳಿ ಮುದ್ದಾಡಿ ಆಡಿಸುತ್ತಿದ್ದರು. ಕಳೆದ ವರ್ಷ ನನ್ನನ್ನು ರಾಜ್ಯ ಮಟ್ಟದ ಭಾಷಣಕ್ಕಾಗಿ ಬಿಜಾಪುರಕ್ಕೆ ಕರೆದುಕೊಂಡು ಹೋಗಿದ್ದರು. ನಾನು ಅವರ ಆಸೆಯಂತೆ ಪ್ರತಿಫಲವಾಗಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ತಂದು ಕೊಟ್ಟಿದ್ದೆ. ಅವರಿಗೆ ತುಂಬಾ ಖುಷಿ ಅನ್ನಿಸಿತು. ಆ ಕಾರಣದಿಂದ ನನಗೆ ಕಳೆದ ವರ್ಷ ಒಂದು ಒಳ್ಳೆಯ ಅವಕಾಶ ದೊರೆತಿತ್ತು. ಅದೇನೆಂದರೆ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನದಂದು ದಿಕ್ಸೂಚಿ ಭಾಷಣಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದರು. ಆವಾಗ ನನ್ನ ಅಪ್ಪ 'ನಿನ್ನಿಂದ ಸಾಧ್ಯ' ಎನ್ನುವ ಮಾತು ಹೇಳಿದ್ದರು. ಆ ಗಣರಾಜ್ಯೋತ್ಸವ ದಿನದಂದು ಮಾಡಿದ ಭಾಷಣ ಎಲ್ಲರಿಗೂ ಖುಷಿ ತಂದುಕೊಟ್ಟಿತ್ತು. ಅದಕ್ಕಾಗಿ ನನ್ನ ಅಪ್ಪ ನನಗೆ ತುಂಬಾ ಇಷ್ಟ. ನನಗೆ ಯಾವುದರಲ್ಲಿ ತುಂಬಾ ಆಸಕ್ತಿ ಇದೆಯೋ ಆ ವಿಷಯದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ ನನ್ನ ಅಪ್ಪ. ಯಾವುದರಲ್ಲಿ ಹೆಚ್ಚು ಆಸಕ್ತಿ ಅದರಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಾರೆ. ಅವರು ತಮಗೆ ಗೊತ್ತಿರುವ ಚಿತ್ರ, ವರ್ಲಿ ಮತ್ತು ಕೊಲಾಜ್ ಮುಂತಾದ ಹಲವು ವಿಷಯಗಳನ್ನು ಹೇಳಿಕೊಡುತ್ತಾರೆ ನನ್ನ ಅಪ್ಪ. ನನಗೆ ಪ್ರತಿಸಲ ಉದಯವಾಣಿ ಚಿತ್ರಕಲಾ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದಲ್ಲಿ ಬಹುಮಾನ ಬರುತ್ತಿತ್ತು. ಆದರೆ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿಗಳು ಕಡಿಮೆ ಬರುತ್ತಿತ್ತು. ನನಗೆ ಪ್ರತಿ ವರ್ಷ ಅಪ್ಪ ಹೇಳುತ್ತಿದ್ದರು ನೀನು ಪ್ರತಿ ನಿತ್ಯ ಅಭ್ಯಾಸ ಮಾಡಿ ಹೆಚ್ಚು ಶ್ರಮ, ಪ್ರಯತ್ನ ಪಟ್ಟರೆ ನಿನಗೆ ರಾಜ್ಯ ಮಟ್ಟದಲ್ಲೂ ಕೂಡ ಪ್ರಶಸ್ತಿಗಳು ಬರಬಹುದು ಎಂದು. ಇದು ಸದಾ ನನಗೆ ಪ್ರೇರಣೆ ನೀಡುತ್ತಿತ್ತು. ಕಳೆದ ವರ್ಷ ನನಗೆ ಉದಯವಾಣಿ ಜಿಲ್ಲಾ ಮಟ್ಟದ ಚಿತ್ರಕಲೆಯಲ್ಲಿ ಪ್ರಶಸ್ತಿ ಬಂತು. ಅವರು ಹೇಳಿದ ಹಾಗೆ ಶ್ರಮ ಪಟ್ಟರೆ ಫಲ ಖಂಡಿತಾ ಸಿಗುತ್ತದೆ... ಮುಂದಕ್ಕೂ ಕೂಡ ನನ್ನ ಅಪ್ಪ ಗಳಿಸಿದ ಎಲ್ಲಾ ಪ್ರಶಸ್ತಿಗಳ ಹಾಗೆ ನಾನು ಕೂಡ ಅನೇಕ ಪ್ರಶಸ್ತಿಗಳನ್ನು ಗಳಿಸುತ್ತೇನೆ.
ಈ ವರ್ಷ ನಾನು ಆಂಗ್ಲ ಮಾಧ್ಯಮಕ್ಕೆ ಸೇರಬೇಕೆಂದು ತುಂಬಾ ಆಸೆ ಇತ್ತು. ಅದೇ ರೀತಿಯಾಗಿ ನನ್ನ ಅಪ್ಪ ನನ್ನನ್ನು ಸೇರಿಸಿದ್ದಾರೆ. ಸೇರುವುದಕ್ಕಿಂತ ಮೊದಲು ನನ್ನ ಅಪ್ಪ ನೀನು ಆಂಗ್ಲ ಮಾಧ್ಯಮದಲ್ಲಿ ಚೆನ್ನಾಗಿ ಓದಿ ಹೆಚ್ಚು ಅಂಕ ತೆಗೆಯಬೇಕೆಂದು ಹೇಳಿದ್ದಾರೆ. ಅದೇ ರೀತಿಯಾಗಿ ನಾನು ಹೆಚ್ಚು ಅಂಕ ಗಳಿಸುತ್ತೇನೆ ಎಂದು ಹೇಳಿದ್ದೇನೆ. ಸದಾ ತಂದೆ ತಾಯಿಯರಿಗೆ ಗುರುಗಳಿಗೆ ಗೌರವ ಕೊಡುತ್ತಾ ಖುಷಿಯನ್ನು ತಂದುಕೊಡುತ್ತೇನೆ ಎಂದು ಹೇಳುತ್ತಾ. ಧನ್ಯವಾದಗಳು...
8ನೇ ಶೌರ್ಯ ತರಗತಿ
ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
2ನೇ ಕಪಿಲ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ