-->
ಪ್ರೀತಿಯ ಪುಸ್ತಕ : ಸಂಚಿಕೆ - 154

ಪ್ರೀತಿಯ ಪುಸ್ತಕ : ಸಂಚಿಕೆ - 154

ಪ್ರೀತಿಯ ಪುಸ್ತಕ
ಸಂಚಿಕೆ - 154
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
      
       
                           ಬಣ್ಣದ ಉಸಿರು 
ಪ್ರೀತಿಯ ಮಕ್ಕಳೇ... ನಾವು ಮನುಷ್ಯರು ದಿನಕ್ಕೆ ಒಂದೊಂದು ಬಣ್ಣದ ಬಟ್ಟೆಗಳನ್ನು ಹಾಕುತ್ತೇವೆ. ಆದರೆ ಇಲ್ಲೊಂದು ಪ್ರಾಣಿ ಇದೆ. ಮ್ಯಾಜಿಕ್ ಪ್ರಾಣಿ. ಅದರ ಬಳಿ ಬಣ್ಣ ಬಣ್ಣದ ಬಟ್ಟೆಗಳಿಲ್ಲ. ಆದರೆ ಅದರ ಚರ್ಮದ ಬಣ್ಣವೇ ಬದಲಾಗುತ್ತಿರುತ್ತದೆ. ಮನು ಒಂದು ದಿನ ರಸ್ತೆ ದಾಟುತ್ತಿದ್ದ ಒಂದು ಪ್ರಾಣಿಯನ್ನು ಗಮನಿಸಿದ. ಆಮೇಲೆ ಅದು ಮರ ಏರುವುದನ್ನು ಕುತೂಹಲದಿಂದ ಗಮನಿಸಿದ. ನೋಡ ನೋಡುತ್ತಿದ್ದಂತೆಯೇ ಆ ಪ್ರಾಣಿ ಕಂದು ಬಣ್ಣಕ್ಕೆ ತಿರುಗಿತ್ತು. ಮರ ಏರುವ ಮೊದಲು ಅದು ಹಸಿರು ಬಣ್ಣದ್ದಾಗಿತ್ತು. ಈ ವಿಷಯವನ್ನು ಮನು ತನ್ನ ಗೆಳತಿ ನಿಶಾ ಹತ್ತಿರ ಹೇಳಿದ. ನಿಶಾ, ‘ಅದು ಊಸರವಳ್ಳಿ, ಗೋಸುಂಬೆ ಎಂದು ಕೂಡಾ ಕರೆಯುತ್ತಾರೆ’ ಅಂತ ವಿವರಿಸಿದಳು. ಮನುಗೆ ಇನ್ನೂ ಕುತೂಹಲ ತಣಿಯಲಿಲ್ಲ. ಊಸರವಳ್ಳಿ ಯಾಕೆ ಬಣ್ಣ ಬದಲಾಯಿಸುತ್ತದೆ? ಹೇಗೆ ಬದಲಾಯಿಸುತ್ತದೆ? ಎಂದು ವಿಚಾರಿಸಿದ. ನಿಜಕ್ಕು ಇದು ಪ್ರಕೃತಿಯ ಅದ್ಭುತಗಳಲ್ಲಿ ಒಂದು. ನಿಮಗೂ ಕುತೂಹಲ ಇದ್ದೇ ಇರುತ್ತದೆ. ಕೆಲವರಿಗೆ ಈಗಾಗಲೇ ಗೊತ್ತಿರಲೂ ಬಹುದು. ಏನೇ ಇರಲಿ ಪುಸ್ತಕ ಓದಿ, ಅದರ ಸೊಗಸನ್ನು ಅನುಭವಿಸಿ. 
ಲೇಖಕರು: ಹೂರ್ ಬಾನು 
ಚಿತ್ರಗಳು: ಬಿ.ಜಿ ಗುಜ್ಜಾರಪ್ಪ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು.
ಬೆಲೆ: ರೂ 70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article