ಪ್ರೀತಿಯ ಪುಸ್ತಕ : ಸಂಚಿಕೆ - 152
Friday, February 28, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 152
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಇಲ್ಲೊಂದು ವಿಶೇಷ ಇದೆ ನೋಡಿ. ಇಲಿ ಒಂದು ಡಾಕ್ಟರ್ ಅಂತೆ ಬೆಕ್ಕಿಗೆ ಗಾಯವಂತೆ. ಗಾಯ ಹೇಗಾಯಿತು ಗೊತ್ತಾ? ಬೆಕ್ಕಿಗೆ ಹಸಿವು ಆಗಿತ್ತು, ಹುಡುಕಿಕೊಂಡು ಹೋಗುವಾಗ ಕಲ್ಲು ತಾಗಿ ಗಾಯ ಆಯಿತು. ನೇರವಾಗಿ ಡಾಕ್ಟರ್ ಇಲಿಯ ಹತ್ತಿರ ಹೋಯಿತು. ಒಳಗೊಳಗೇ ಬೆಕ್ಕಿಗೆ ಖುಶಿ. ಗಾಯವೂ ವಾಸಿ ಆಗುತ್ತದೆ, ಆಮೇಲೆ ಇಲಿಯನ್ನು ನುಂಗಿದರೆ ಹಸಿವೆಯೂ ಹೋಗುತ್ತದೆ. ಇಲಿಗೆ ಬೆಕ್ಕನ್ನು ಕಂಡು ಭಯವಾದರೂ ತಾನು ಡಾಕ್ಟರ್ ಆದ ಕಾರಣ ಶ್ರದ್ಧೆಯಿಂದ ಬೆಕ್ಕಿನ ಚಿಕಿತ್ಸೆ ಮಾಡುತ್ತದೆ. ಬೆಕ್ಕಿನ ಗಾಯ ಬೇಗ ವಾಸಿಯಾಗುವುದಿಲ್ಲ. ದಿನಾ ಚಿಕಿತ್ಸೆಗೆ ಬರಬೇಕಾಗುತ್ತದೆ. ಈಗ ನೀವು ಈ ಕಥೆ ಮುಂದುರಿಸುವುದಾದರೆ ಹೇಗೆ ಮಾಡುತ್ತೀರಿ. ಬೆಕ್ಕಿನ ಗಾಯ ವಾಸಿ ಆಗುವುದೇ? ಬೆಕ್ಕು ಇಲಿಯನ್ನು ತಿಂದು ಹಾಕುವುದೇ? ಅಥವಾ ಇನ್ನೇನಾದರೂ ಆಗಬಹುದೇ.. ಚಂದದ ಕಥೆ.. ನೀವು ನಿಮ್ಮ ಆಲೋಚನೆ ಮಾಡಿ ಆದಮೇಲೆ, ಪುಸ್ತಕ ಓದಿ ನೋಡಿ.
ಲೇಖಕರು: ವಿಭಾ ಬಿ.ಎಂ
ಚಿತ್ರಗಳು: ರಾ. ಸೂರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು.
ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************