-->
ಮಕ್ಕಳ ಕವನಗಳು : ಸಂಚಿಕೆ - 32: ಜಗಲಿಯ ಮಕ್ಕಳ ಸ್ವರಚಿತ ಕವನಗಳು

ಮಕ್ಕಳ ಕವನಗಳು : ಸಂಚಿಕೆ - 32: ಜಗಲಿಯ ಮಕ್ಕಳ ಸ್ವರಚಿತ ಕವನಗಳು

ಮಕ್ಕಳ ಕವನಗಳು : ಸಂಚಿಕೆ - 32
ಜಗಲಿಯ ಮಕ್ಕಳ ಸ್ವರಚಿತ ಕವನಗಳು

ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಕೆ ಧರಿತ್ರಿ ಭಟ್, 9ನೇ ತರಗತಿ
◾ ಧನ್ವಿ, 6ನೇ ತರಗತಿ 
◾ ರಕ್ಷಿತಾ, 9ನೇ ತರಗತಿ  
◾ ಗೀತಾ ಮ ಕೂನವೇವು, 9ನೇ ತರಗತಿ
◾ ಚಂದ್ರಿಕಾ ಮಾ ಕಂಬಳಿ, 9ನೇ ತರಗತಿ
◾ ಮಾಳವ್ವ ದಿ ಕಂಬಳಿ, 9ನೇ ತರಗತಿ
◾ ಧನ್ವಿನ್ ಮೇಸ್ತ, 6ನೇ ತರಗತಿ
◾ ಕುಮಾರಿ  ಪ್ರಾಕ್ಷಿ ಶೆಟ್ಟಿ, 10ನೇ ತರಗತಿ
◾ ದೀಪಾ.ಮಲ್ಲಪ್ಪ.ಜಾಗಟಿ, 9ನೇ ತರಗತಿ


ಭಾರತ ಮಾತೆಯ ಮಕ್ಕಳು ನಾವು
ವಿಕಸಿತ ಭಾರತ ಕಟ್ಟೋಣ 
ಸರ್ವರ ಪ್ರಗತಿಯ ಬಯಸುವ ನಾವು 
ಬಡವರ ಏಳಿಗೆ ಬಯಸೋಣ

ಮಾತೃ ಶಕ್ತಿಯೇ ವಿಶ್ವಶಕ್ತಿಯು
ಸ್ರೀ ಸಮಾನತೆ ಕಾಯೋಣ 
ಯುವಕರೆ ದೇಶದ ಭದ್ರಬುನಾದಿ 
ಯುವ ಜನತೆಯ ಬಲಗೊಳಿಸೋಣ 

ರೈತನೆ ದೇಶದ ಬೆನ್ನೆಲುಬು 
ಅನ್ನದಾತನ ಸುಖ ಬಯಸೋಣ 
ದೇಶ ರಕ್ಷಣೆಯ ಕಂಕಣ ತೊಟ್ಟಿಹ
ಸೈನಿಕರಿಗೆ ಶಿರಬಾಗೋಣ

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು 
ಸಾಕ್ಷರ ಭಾರತ ರಚಿಸೋಣ 
ಆರ್ಥಿಕ ಸದೃಢ ಭಾರತವಾಗಲು 
ಕಾರ್ಯ ಕ್ಷಮತೆಯ ಗುಣ ಬೆಳೆಸೋಣ 

ಇತಿಹಾಸ ಸಂಸ್ಕೃತಿ ಉತ್ಕೃಷ್ಟಗೊಳಿಸುವ
ಕೌಶಲ ಕಲೆಗಳ ಸಂರಕ್ಷಿಸೋಣ 
ಸಂಗೀತ ನೃತ್ಯ ಶಿಲ್ಪಕಲೆಗಳ 
ಪ್ರಗತಿಗೆ ಅವಿರತ ಶ್ರಮಿಸೋಣ

ಚಂದ್ರಯಾನದ ಸಾರ್ಥಕ ಕ್ಷಣಗಳ
ಅನುದಿನ ನಾವು ಸ್ಮರಿಸೋಣ 
ಸೂರ್ಯನ ವಿಶೇಷ ಅರಿಯಲು ನಾವು 
ಆದಿತ್ಯನ ಸಂಶೋಧನೆ ಗೈಯೋಣ

ವಿಕಸಿತ ಭಾರತ ವಿಶ್ವಗುರುವಾಗಲಿ
ಒಗ್ಗಟ್ಟಿನ ಮಂತ್ರವ ಜಪಿಸೋಣ 
ಜಾತಿ ಪಂಥಗಳ ಮೆರೆಯುತ ನಾವು 
ಸೌಹಾರ್ದ ಜೀವನ ನಡೆಸೋಣ
.......................................... ಕೆ ಧರಿತ್ರಿ ಭಟ್ 
9ನೇ ತರಗತಿ 
ಕೆ.ಪಿ.ಎಸ್ (ಪ್ರೌಢಶಾಲೆ) ಕುಂಬ್ರ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


 
ಬೆಳಗಾದರೆ ಮೊಗ್ಗಾಗುವೆ
ಸಂಜೆಯಾದರೆ ಅರಳಿ ನಿಂತಿರುವೆ
ದಿನನಿತ್ಯವು ನೀನು ದೇವರ
ಪಾದಕ್ಕೆ ಆಗುವೆ ಶೃಂಗಾರ

ಕೆಂಪು, ಬಿಳಿ, ಕೇಸರಿ
ನೀಲಿ, ಹಳದಿ, ಗುಲಾಬಿ
ವಿಧ ವಿಧ ಬಣ್ಣದಿಂದ
ಶೃಂಗಾರಿಸುವೆ ನೀ ಪರಿಸರ

ಅಂಗಡಿಯಲ್ಲಿ ಮಾರಾಟಾಕ್ಕಾಗುವೆ
ದೇವಸ್ಥಾನದಲ್ಲಿ ಪೂಜೆಗಾಗುವೆ
ಶೃಂಗಾರಕ್ಕಾಗುವೆ ನೀ ಕಾರ್ಯಕ್ರಮದಲ್ಲಿ
ತರಿಸುವೆ ನಗುವ ಎಲ್ಲರ ಮೊಗದಲ್ಲಿ

ಬತ್ತಿ ಹೋಗಿರುವ ಬರಗಾಲದಿ
ಭರವಸೆ ತರುವೆ ನೀ ಅರಳಿ
ಪ್ರೀತಿ ಭಕ್ತಿ ಶೃಂಗಾರವು
ನಿನ್ನ ಅರ್ಪಣೆಯಿಂದ ಸಾರ್ಥಕವಾಗುವುದು    
..................................................... ಧನ್ವಿ
6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ 
ಶಾಲೆ, ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

                 
ಅನ್ನ ನೀಡುವ ರೈತನೆ ದೇಶ ಪೋಷಕ
ಇವನೆ ನಮ್ಮ ದೇಶದ ಸಂರಕ್ಷಕ||

ರೈತನಿಲ್ಲದೆ ದೇಶ ಸಾಗಬಹುದೇ?
ಜೀವನ ಸಾಗಬಹುದೇ? 
ಕೃಷಿ ದೇಶದ ಅಭಿವೃದ್ಧಿ
ರೈತ ದೇಶದ ಬೆನ್ನೆಲುಬು||

ರೈತನೆಂದು ಬೇಡ ಅವಮಾನ
ರೈತರೆ ದೇವರಿಗೆ ಸಮಾನ 
ರೈತರಿಗೆ ಆಗಬೇಕು ಸನ್ಮಾನ
ರೈತರಿಗೆ ಸಿಗಬೇಕು ದೊಡ್ಡ ಬಹುಮಾನ||
..................................................... ರಕ್ಷಿತಾ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ
******************************************


ಕಷ್ಟದಲ್ಲಿ ನಿಲ್ಲುವನೆ ಸ್ನೇಹಿತ
 ಗೆಳೆಯರ ಮಾತು ಎಂದಿಗೂ ಹಿತ
 ನಮ್ಮ ಸ್ನೇಹವೇ ಶಾಶ್ವತ

 ಅವಳ ಗೆಲುವಲ್ಲಿ ನಾ ನಗಲು
  ಅವಳ ಪ್ರೀತಿ ತಾಯ್ತುಗೂ ತೊಟ್ಟಿಲು
 ನಮ್ಮ ಸಾಧನೆಗೆ ಸೋಲೇ ಮೆಟ್ಟಿಲು

 ಹುಟ್ಟಿನಿಂದ ಬೆಳೆದ ಸಂಬಂಧವೇ
 ನಮ್ಮ ಈ ಅನುಬಂಧವು
 ಸ್ನೇಹಿತನೇ ನಮ್ಮೊಲವು

 ಮನಸಲ್ಲಿದೆ ಸ್ನೇಹವೆಂಬ ಪ್ರೀತಿ
 ಸ್ನೇಹಕ್ಕೆ ಇಲ್ಲ ಯಾವುದೇ ಭೀತಿ
 ಇದುವೇ ಜಗದ ರೀತಿ

 ಸ್ನೇಹವೆಂಬುದು ಸಾಗರ
 ಅಲೆಗಳಂತೆ ನಮ್ಮ ಮನಸ್ಸು ಹಗುರ
 ನಮ್ಮ ಸ್ನೇಹ ಸಂಬಂಧವೇ ಮಧುರ 
................................. ಗೀತಾ ಮ ಕೂನವೇವು
9ನೇ ತರಗತಿ
ಎಸ್ ಬಿ ಎಚ್ ಎಸ್ ಮೆಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************



 ನೂರಾರು ಪುಟಗಳಿರುವ ಪುಸ್ತಕ
 ಜ್ಞಾನ ತುಂಬಾ ಪುಸ್ತಕ

 ಪಾಠವನ್ನು ಓದೋಣ
 ಅಕ್ಷರವನ್ನು ತಿಳಿಯೋಣ

 ಅಕ್ಷರವೇ ನಮ್ಮ ಜ್ಞಾನ
 ಅದುವೇ ನಮ್ಮ ಜೀವನದ ವಿಜ್ಞಾನ

 ಜ್ಞಾನ ತಿಳಿದುಕೊಳ್ಳೋಣ
 ಜೀವ ಜ್ಞಾನಿ ಆಗೋಣ
................................ ಚಂದ್ರಿಕಾ ಮಾ ಕಂಬಳಿ
9ನೇ ತರಗತಿ
ಎಸ್ ಬಿ ಎಚ್ ಎಸ್ ಮೆಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************



ಶಿವ ಶಿವ.. ಶಿವನೇ
ಪ್ರತಿದಿನ ಹರ ಹರ ಹರನೇ

ಶಿವನಿಗೆ ಬಹಳ ಶಕ್ತಿ
ನಾವು ಕೋರಿದೆವು ಭಕ್ತಿ 

ಶಿವನ ಪೂಜೆಗೆ ಹೂಗಳು
ಪ್ರತಿ ವರ್ಷದ ಶಿವರಾತ್ರಿಗೆ ಹಣ್ಣುಗಳು

ಶಿವನಿಗೆ ಮಾಡಬೇಕು ತಲಬಾಗಿ ನಮನ
ಶಿವನ ಕೈಯಲ್ಲಿದೆ ನಮ್ಮಿ ಜೀವನ  
..................................... ಮಾಳವ್ವ ದಿ ಕಂಬಳಿ
9ನೇ ತರಗತಿ
ಎಸ್ ಬಿ ಎಚ್ ಎಸ್ ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************



ಮೂಡಣದಲಿ ಮೂಡುವ ಕೆಂಪನೆ ಚೆಂಡು 
ಜಗವನು ಬೆಳಗುವನು 
ಬಾನಲ್ಲಿ ಹಕ್ಕಿಗಳು ಚಿಲಿಪಿಲಿ ಗುಟ್ಟುತ
ನೇಸರನ ಸೊಗಸನು ಸವಿಯುವರು.

ಬೆಳಕನು ಬಿಸಿಲನು ನೀಡುವ ನೇಸರ
ಮರ ಗಿಡಗಳಿಗೆ ಆಧಾರವಾಗಿಹನು
ಮರೆಯದೆ ಕರ್ತವ್ಯ ಮಾಡುತ 
ಭೂಮಿಯ ಪೋಷಕನಾಗಿಹನು.

ಸೂರ್ಯನ ಕರ್ತವ್ಯ ತಿಳಿದ ನಾವು
ಮರೆಯದೆ ನಮ್ಮ ಕರ್ತವ್ಯ ಮಾಡುತ
ನಮ್ಮ ಬದುಕನ್ನು ಹಸನಾಗಿಸುತ 
ನಲಿಯುತ ಬಾಳೋಣ.
........................................... ಧನ್ವಿನ್ ಮೇಸ್ತ
6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕೆರೆಕಾಡು, ಮಂಗಳೂರು ಉತ್ತರ 
ದಕ್ಷಿಣ ಕನ್ನಡ ಜಿಲ್ಲೆ
******************************************


 
ಎಲೂ ಇಲ್ಲದ ಗೌಜಿ ಗಮ್ಮತ್ 
ನಮ್ಮಊರಿಗೆ
ಅದೆ ನಮ್ಮ ಕುಂದಾಪ್ರ ಊರಿಗೆ 
ಹೊಯ್ಯ್ ಬನೀಯೇ ನಮ್ಮ ಊರ ಬದಿಗೆ 
ಅದೆ ನಮ್ಮ ಕುಂದಾಪ್ರದ ಬದಿಗೆ 
ನನ್ನ ಊರ ನಂಗೆ ಇಷ್ಟ
ತೀರಿಸುವೆ ಋಣ ಹಾಂಗಾರು ಕಷ್ಟ
ನನ್ನ ಊರ ನಂಗೆ ಪ್ರಾಣ 
ನನ್ನ ಊರಿಗೆ ನಾನಾತೆ ಜಾಣ
ಕುಂದಾಪ್ರ ಊರ ಒಂದು
ನಾವೆಲ್ಲ ವಟ್ಟ ಆಪಾ ಎಂದೆಂದು 
ನೋಡು ನಮ್ಮ ಕುಂದಾಪ್ರ ಸ್ಥಾನ 
ಅದ ಆಗಿದೆ ವಿವಿಧ ಆಶ್ರಯ ತಾಣ 
ಇದೆ ಆಸಾಡಿ ಅಮಾಸಿ ಕುಂದಾಪ್ರ ಕನ್ನಡ ದಿನ
ಸಪ್ತ ಸ್ವರಗಳಲಿ ನಾ ಹಾಡುವೆ 
ಕುಂದಾಪ್ರ ಕನ್ನಡ ದಿನ.   
.................................. ಕುಮಾರಿ ಪ್ರಾಕ್ಷಿ ಶೆಟ್ಟಿ
10ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************                                             
                 


ಕಷ್ಟದಿಂದ ಬೆಳೆದವರು
ಮುಂದೆ ನಾಡಿನ ಪ್ರಜೆಯಾದರು

ನಾಡಿನ ಬೆಳಕು ಮಹಿಳೆ 
ಹರುಷದ ದಾರಿ ತೋರುವಳು ಮಹಿಳೆ

ಸಂಸಾರದ ಕಣ್ಣು 
ಅವಳೆ ನಮ್ಮ ಹೆಣ್ಣು

ಹೆಣ್ಣಿನಲ್ಲಿದೆ ತಾಕತ್ತು
ಸಂಸಾರದ ಗಮ್ಮತ್ತು

ಹೆಣ್ಣನ್ನು ಭೂತಾಯಿಗೆ ಹೋಲಿಸಿ
ಭಾರವನ್ನು ಸಹಿಸಿ ಎಲ್ಲರನ್ನು ಹಾರೈಸಿ

ಹೆಣ್ಣಿಗಿದೆ ಅಪಾರ ಗೌರವ
ಸಂತೋಷದಿಂದ ನಲಿಯುವ
............................... ದೀಪಾ.ಮಲ್ಲಪ್ಪ.ಜಾಗಟಿ
9ನೇ ತರಗತಿ
ಎಸ್.ಬಿ.ಎಚ್.ಎಸ್.ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************




Ads on article

Advertise in articles 1

advertising articles 2

Advertise under the article