ನಿಷ್ಪಾಪಿ ಸಸ್ಯಗಳು : ಸಂಚಿಕೆ - 58
Wednesday, July 10, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 58
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ...? ಆಧುನಿಕತೆಯ ಭರಾಟೆಯಲ್ಲಿ ಭೋರ್ಗರೆವ ಮಳೆಯ ನಡುವೆಯೂ ಹೂಕೋಸು, ಬಟಾಟೆ, ಟೊಮೇಟೊ, ಎಲೆಕೋಸುಗಳಂತಹ ತರಕಾರಿಗಳನ್ನು ಕ್ರಿಮಿನಾಶಕ ದಲ್ಲಿ ಮುಳುಗಿದ್ದರೂ ನಾವು ಮುಗಿಬಿದ್ದು ಖರೀದಿಸಿ ಸೇವಿಸುತ್ತೇವೆ. ನಾವು ನಮ್ಮ ಹಿತ್ತಿಲು ಅಥವಾ ಗುಡ್ಡ ಬೈಲು ಗದ್ದೆಗಳ ನಡುವೆ ಕಣ್ಣು ಹಾಯಿಸುವುದನ್ನೇ ಬಿಟ್ಟಿದ್ದೇವೆ ಎಂದನಿಸುತ್ತಿಲ್ಲವೇ...?
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಹಿರಿಯರ ಕಾಲದಲ್ಲಿ ಸುರಿವ ವಿಪರೀತ ಮಳೆಗೆ ಪ್ರತ್ಯಕ್ಷವಾಗುವ ನಾನಾ ರೋಗಗಳಿಂದ ರಕ್ಷಣೆ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಇಂದಿನಂತೆ ಔಷಧಿಗಳು ವೈದ್ಯರು, ಆಸ್ಪತ್ರೆಗಳ ಕಲ್ಪನೆಗಳೇ ಇರಲಿಲ್ಲ. ಹೀಗಿರುವಾಗ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿದ್ದುದು ಕೆಸು, ಒಂದೆಲಗ, ತಗಚೆ, ನುಗ್ಗೆ, ಕಾಡು ಸುವರ್ಣಗಡ್ಡೆ, ಹಲಸು, ಕಲ್ಲು ಹುಳಿ, ಬಿದಿರಿನ ಚಿಗುರು ಮೊದಲಾದುವು.