-->
ಪ್ರೀತಿಯ ಪುಸ್ತಕ : ಸಂಚಿಕೆ - 110

ಪ್ರೀತಿಯ ಪುಸ್ತಕ : ಸಂಚಿಕೆ - 110

ಪ್ರೀತಿಯ ಪುಸ್ತಕ
ಸಂಚಿಕೆ - 110
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                     
                        ಆನೆಗೂ ಒಂದು ದಾರಿ
ಪ್ರೀತಿಯ ಮಕ್ಕಳೇ... ಇದೊಂದು ಆಸಕ್ತಿದಾಯಕ ಪುಸ್ತಕ. ಶಾಲಿನಿ ಪುಟ್ಟ ಹುಡುಗಿ. ರಜ ಸಿಕ್ಕಿದಾಗ ಅಜ್ಜನ ಮನೆಗೆ ಬಂದಿದ್ದಾಳೆ. ಅಲ್ಲಿ ನೋಡಿದರೆ ಆನೆಗಳು ಬಂದು ಬಾಳೆಗಿಡಗಳನ್ನು ಕಿತ್ತು ಕಿತ್ತು ಹಾಕಿವೆ. ಶಾಲಿನಿಗೆ ಆಶ್ಚರ್ಯ. ಯಾಕೆ ಹೀಗೆ? ಆನೆಗಳದ್ದು ತಪ್ಪೇ? ನಮ್ಮ ತಪ್ಪೇ? ನಮ್ಮ ಮನೆಯಿಂದ ಹೊರಗೆ ಓಡಾಡುವ ದಾರಿಯನ್ನು ಯಾರಾದರೂ ಆಕ್ರಮಿಸಿದರೆ ನಮಗೆ ಎಷ್ಟು ಕಿರಿಕಿರಿ ಆಗುತ್ತದೆ; ಕೋಪ ಬರುತ್ತದೆ. ಆನೆಗೂ ಹಾಗೆಯೇ ಆಗಿರಬಹುದಲ್ಲಾ! ಆನೆಗಳಿಗೆ ಅದರದ್ದೇ ಆದ ಒಂದು ದಾರಿ ಇರುತ್ತದಂತೆ. ಅದಕ್ಕೆ ಆನೆ ಕಾರಿಡಾರ್ ಅನ್ನುತ್ತಾರೆ. ಈ ದಾರಿಯ ಬಗ್ಗೆ ಪೀಳಿಗೆಯಿಂದ ಪೀಳಿಗೆಗೆ ಅವರ ಜೀನ್ಸ್ ನಲ್ಲಿಯೇ ಈ ಅರಿವು ಬರುತ್ತದೆ. ಈ ದಾರಿ ತಪ್ಪಿ ಹೋದರೆ ಆನೆಗಳು ಬಹಳ ಕಷ್ಟ ಪಡುತ್ತವೆ. ಬೇರೆ ದಾರಿ ಹುಡುಕಲು ಅವರಿಗೆ ಗೊತ್ತಿಲ್ಲ. ಎಷ್ಟು ವಿಶೇಷ ಅಲ್ವಾ? ಚಂದದ ಚಿತ್ರಗಳೂ ಇವೆ. ಶಾಲಿನಿ ಇವೆಲ್ಲಾ ತಿಳಿದುಕೊಂಡು ಏನು ಮಾಡಿದಳು ಅಂತ ಓದಿ ನೋಡಿ. ನಮ್ಮ ಜೊತೆಗೆ ಬದುಕುವ ಪ್ರಾಣಿ ಜಗತ್ತಿಗಾಗಿ ನಾವೂ ಏನಾದರೂ ಮಾಡಬೇಕೇ ಯೋಚಿಸಿ. 
ಲೇಖಕರು: ಉಷಾ ಕಟ್ಟೀಮನಿ
ಚಿತ್ರಗಳು: ಶೀನಾ ದೇವಯ್ಯ  
ಪ್ರಕಾಶಕರು: ನವಕರ್ನಾಟಕ ಪ್ರಕಾಶನ (ಟಾಟಾ ಟ್ರಸ್ಟ್ ನ ಪರಾಗ್ ಇನಿಶಿಯೇಟಿವ್ ನ ಕೊಡುಗೆ) 
ಬೆಲೆ: ರೂ.60/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: navakarnataka@gmail.com; www.navakrnataka.com 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article