-->
ಪ್ರೀತಿಯ ಪುಸ್ತಕ : ಸಂಚಿಕೆ -106

ಪ್ರೀತಿಯ ಪುಸ್ತಕ : ಸಂಚಿಕೆ -106

ಪ್ರೀತಿಯ ಪುಸ್ತಕ
ಸಂಚಿಕೆ - 106
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 


                                 ಏಡಿ ಶಿಕಾರಿ
   ಪ್ರೀತಿಯ ಮಕ್ಕಳೇ.... ಚೀಂಕ್ರ ಮತ್ತು ಅವನ ತಂದೆ ಮಾರ ಏಡಿ ಶಿಕಾರಿ ಮಾಡುವ ಗೌಜಿ ಗದ್ದಲ ಈ ಪುಸ್ತಕದಲ್ಲಿ ಇದೆ. ಬಡತನದ ಬದುಕಿನಲ್ಲಿ ಕೂಡಾ ಎಂತೆಂತಹ ಮನರಂಜನೆಗಳು ಇರುತ್ತವೆ ಅಂತ ಈ ಕಥೆ ಓದುವಾಗ ಗೊತ್ತಾಗುತ್ತದೆ. ಮಳೆಗಾಲದಲ್ಲಿ ಭತ್ತದ ಗದ್ದೆಗಳಲ್ಲಿ ಏಡಿಗಳ ಬೇಟೆಯಾಡುವುದು ಆ ಪ್ರದೇಶದ ಮಂದಿಗೆ ಬಹಳ ಆನಂದದ ಮತ್ತು ಸಂಭ್ರಮದ ವಿಷಯ. ಇಲ್ಲಿ ಮಾರನಿಗೆ ಏಡಿ ಅಡುಗೆ ಊಟ ಮಾಡುವ ಹಂಬಲ. ಮಗ ಚೀಂಕ್ರನಿಗೆ ಅದನ್ನು ಹಿಡಿಯುವ ಕೆಲಸವೇ ಒಂದು ಸಾಹಸದ ಆಟ. ಮಳೆ ಪ್ರದೇಶದ ಅನುಭವ ನೀಡುವಂತಹ ಚಿತ್ರಗಳು ಇದರಲ್ಲಿ ಕಾಣಬಹುದು. ಚೀಂಕ್ರ ಏಡಿಗಳನ್ನು ಹಿಡಿಯುವ ರೀತಿ, ಅಪ್ಪ ಹಿಡಿದುಕೊಟ್ಟ ಏಡಿಗಳ ಜೊತೆಗೆ ಆಟವಾಡುವ ರೀತಿ ಎಲ್ಲವೂ ಮಜವಾಗಿವೆ. ನೀವೂ ಇಷ್ಟ ಪಡುತ್ತೀರಿ. ಓದಿ ನೋಡಿ. 
ಲೇಖಕರು: ಗಿರೀಶ್ ಮೂಗ್ತಿಹಳ್ಳಿ
ಚಿತ್ರಗಳು: ಪೂಜಾ ಮುಗೆರಾಯ  
ಪ್ರಕಾಶಕರು: ನವಕರ್ನಾಟಕ ಪ್ರಕಾಶನ (ಟಾಟಾ ಟ್ರಸ್ಟಿನ ಪರಾಗ್ ಇನಿಶಿಯೇಟಿವ್ ಬೆಂಬಲದೊಂದಿಗೆ)
ಬೆಲೆ: ರೂ.60/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: navakarnataka@gmail.com; www.navakrnataka.com 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article