-->
ಕವನ ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ,  ಪ್ರಥಮ ಪಿಯುಸಿ

ಕವನ ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ, ಪ್ರಥಮ ಪಿಯುಸಿ

ಕವನ ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ 
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ ಉತ್ತರ ಕನ್ನಡ
                         
ಮಳೆಗಾಲದ ಮಧುರ ಕ್ಷಣದಿ...
ಮನಕೆ ಮುದ ನೀಡುವ‌ ವನದಿ
ಕಣ್ ಸೆಳೆಯುವ ಹೂವಿದು...
ಸೀತಾಮಾತೆಯೂ ಬಯಸುವಂತಹ 
ಸೀತಾದಂಡೆಯ ಮಾಲೆಯಿದು  
ಪ್ರಕೃತಿಯೇ ಸಿದ್ಧಪಡಿಸಿದಂತಹ ಮೆರಗು
ಸ್ವಲ್ಪ ಬಿಳಿ-ಗುಲಾಬಿಯ ರಂಗು
ಕಂಡರೆ ನಾಚುವ ಕುಸುಮಗಳು
ಮರದಂಚಲಿ ಮರೆಯಾಗುವುವು..
ಮಹಾನ್ ತಜ್ಞರಿಗೂ ಹೂ ಪೋಣಿಸುವ
ಸವಾಲೆಸೆಯುವುದು...
ಇದೇ ಇದರ ಚಮತ್ಕಾರವು
ತಿಳಿಯದು ಈ ಅದ್ಬುತ ಕಲೆ...
ಬಿಡಿಸಲು ಕಷ್ಟವೇ ಸರಿ 
ಈ ಪ್ರಶ್ನೆಯ ಮಾಯಾಬಲೆ !!         
...................... ಪ್ರಥ್ವಿ ಮಹಾಬಲೇಶ್ವರ ಜೋಶಿ 
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ, ಉತ್ತರ ಕನ್ನಡ ********************************************    

Ads on article

Advertise in articles 1

advertising articles 2

Advertise under the article