-->
ಪ್ರೀತಿಯ ಪುಸ್ತಕ : ಸಂಚಿಕೆ - 65

ಪ್ರೀತಿಯ ಪುಸ್ತಕ : ಸಂಚಿಕೆ - 65

ಪ್ರೀತಿಯ ಪುಸ್ತಕ
ಸಂಚಿಕೆ - 65
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ.  ಹೊಸ ಹೊಸ  ಅನುಭವ ಇಷ್ಟ.  ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 


                          ಕಡಲೆ ಬೀಜ ಕಳ್ಳ  
   ಪ್ರೀತಿಯ ಮಕ್ಕಳೇ.... ಪರಿ ಮತ್ತು ಸಿರಿಯ ಪುಟ್ಟ ಕಥೆ ಇದು. ತಮ್ಮ ಮನೆ ಪಕ್ಕ ಇರುವ ಖಾಲಿ ಸೈಟಿನಲ್ಲಿ ಇರುವ ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ಅವುಗಳಿಂದ ಸಿಗುವ ಆನಂದವನ್ನು ಈ ಕಥೆಯಲ್ಲಿ ವಿವರಿಸುತ್ತಾರೆ. ಸಿರಿ ಪಕ್ಷಿಗಳ ಅನುಕರಣೆ ಮಾಡುವುದನ್ನೂ ಕಲಿತುಕೊಂಡಿದ್ದಳು. ಅಜ್ಜಿ ಯಾವಾಗಲೂ ಸಿರಿಗೆ, ಅವಳು ಲುಟುಪುಟು ಓಡಾಡುವ ಅಳಿಲುಗಳ ಹಾಗೆ ಅಂತ ಹೇಳುತ್ತಿದ್ದರು. ಸಿರಿಗೆ ಹಲ್ಲು ಗಟ್ಟಿಯಾಗಿ ಇಲ್ಲವಾಗಿರುವುದರಿಂದ ಅವಳು ಕಡಲೆ ಬೀಜ, ಪುಟಾಣಿ ಮುಂತಾದ ಕಾಳುಗಳನ್ನು ಬಾಲ್ಕನಿಯ ತುದಿಯಲ್ಲಿ ಇಡುತ್ತಿದ್ದರೆ, ಅವು ಮಾಯವಾಗುತ್ತಿದ್ದವು. ಈ ಕಡಲೆ ಕಳ್ಳ ಯಾರು ಎಂಬುದೇ ಅವಳ ಮತ್ತು ಮನೆಯಲ್ಲಿ ಎಲ್ಲರ ಚಿಂತೆ.. ಅವಳು ಕಡಲೆ ಕಳ್ಳನನ್ನು ಹೇಗೆ ಹಿಡಿದಳು? ಅವಳಿಗೆ ಮತ್ತು ಅವಳ ಅಪ್ಪನಿಗೆ ಬಿದ್ದ ಚಿತ್ರವಿಚಿತ್ರ ಕನಸುಗಳೇನು ಅಂತ ತಿಳಿಯುವ ಕುತೂಹಲ ಇದ್ದರೆ ಓದಿ ಈ ಪುಸ್ತಕ. 
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಲೇಖಕರು: ಶೇಷಗಿರಿ ಆರ್ ಕುಲಕರ್ಣಿ
ಚಿತ್ರಗಳು: ವೆಂಕಟೇಶ ಆರ್ ದೇಸಾಯಿ 
ಬೆಲೆ: ರೂ.60/-
ನಾಲಕ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article