-->
ದೀಪಾವಳಿ ವಿಶೇಷ ಕವನ

ದೀಪಾವಳಿ ವಿಶೇಷ ಕವನ

ಮಕ್ಕಳ ಜಗಲಿಯಲ್ಲಿ
5ನೇ ತರಗತಿ ವಿದ್ಯಾರ್ಥಿ
ನಿನಾದ್ ಕೈರಂಗಳ 
ಬರೆದಿರುವ ದೀಪಾವಳಿ ವಿಶೇಷ ಕವನ


ನಾವು ಮನೆಯ ಸುತ್ತ ಮುತ್ತಲು 
ಬೆಳಗಿಸುತ್ತೇವೆ ದೀಪ
ಅದನ್ನು ನೋಡಿದಾಗ ಕಾಣಿಸುತ್ತದೆ
ದೇವರ ರೂಪ 
        ಪಟಾಕಿಗಳನ್ನು ಸಿಡಿಸುವುದು 
        ನೋಡುವುದೇ ಚಂದ
        ನಕ್ಷತ್ರಕಡ್ಡಿಯನ್ನು ಉರಿಸುವುದೇ 
        ನನಗಾನಂದ
ಅಪ್ಪ ತಂದ ನೀಲಿ ಬಣ್ಣದ 
ಹೊಸ ಬಟ್ಟೆ
ಅದನ್ನು ನೋಡಿ ನಾನು 
ತುಂಬಾ ಸಂತೋಷಪಟ್ಟೆ
        ಅಂದು ನರಕಾಸುರನನ್ನು ಶ್ರೀಕೃಷ್ಣ
        ಕೊಂದ ದಿನ
        ಇಂದು ನಮಗೆಲ್ಲರಿಗೂ ದೀಪಾವಳಿಯ 
        ಸಂಭ್ರಮದ ಸುದಿನ             
..................................... ನಿನಾದ್ ಕೈರಂಗಳ 
5ನೇ ತರಗತಿ 
ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************** 


Ads on article

Advertise in articles 1

advertising articles 2

Advertise under the article