-->
ಸಾಮರಸ್ಯ - ಕವನ

ಸಾಮರಸ್ಯ - ಕವನ

ಮಕ್ಕಳ ಜಗಲಿಯಲ್ಲಿ
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
ಸಿಂಚನಾ ಎಸ್ ಶೆಟ್ಟಿ
ಬರೆದಿರುವ ಕವನ
        

ಓ ದೇವನೇ ಪ್ರಶ್ನಿಸುವೆ ನಾ ನಿನ್ನಲ್ಲಿ 
ಜಾತಿ ಮತ ಪಂಗಡ ಯಾಕೆ ಬೇಕಿಲ್ಲಿ
ಹಣ ಆಸ್ತಿ ಅಂತಸ್ತು ಕೊಂಡೊಯ್ಯುವರಾರು
ಸತ್ತ ಮೇಲೆ ಮಸಣದ ಹಾದಿಯಲಿ......
      ಮೇಲು ಕೀಳು ಎಂಬ ಭಾವನೆ ಹೊತ್ತು
      ಗಳಿಸುವರು ಕೈತುಂಬಾ ಸಂಪತ್ತು
      ಇನ್ನೊಬ್ಬರ ಮನಸ್ಸನ್ನು ನೋಯಿಸಿ
      ಹಾಕಿಕೊಳ್ಳುವರು ಮೈಮೇಲೆ ಆಪತ್ತು
ನಾವೆಲ್ಲರೂ ಒಂದೇ ತಾಯಿಯ ಮಕ್ಕಳು
ಎಂಬ ಮನೋಭಾವನೆ ಇದ್ದಷ್ಟು
ಜಗತ್ತು ಮುಂದೆ ಬರುವುದು 
ಊಹಿಸಿ ಕೊಳ್ಳಲಾಗದಷ್ಟು
................................. ಸಿಂಚನಾ ಎಸ್ ಶೆಟ್ಟಿ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ಕಾರ್ಕಳ
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
********************************************



Ads on article

Advertise in articles 1

advertising articles 2

Advertise under the article