-->
ಸೌಹಾರ್ದತೆ - ಕವನ

ಸೌಹಾರ್ದತೆ - ಕವನ

ಮಕ್ಕಳ ಜಗಲಿಯಲ್ಲಿ
10ನೇ ತರಗತಿ ವಿದ್ಯಾರ್ಥಿನಿ
ಶಿಫಾನ
ಬರೆದಿರುವ ಕವನ


ವಿವಿಧತೆಯಲ್ಲಿ ಏಕತೆ
ಅದುವೇ ನಮ್ಮ ವಿಶೇಷತೆ
ನಾವೆಲ್ಲರೂ ಯಾವಾಗಲೂ ಒಂದೇ
ಅದಕ್ಕಾಗಿ ಬರಬೇಕು ಮುಂದೆ
   ವಿದ್ಯೆಯನ್ನು ಅರಸುವವನು ವಿದ್ಯಾರ್ಥಿ
   ಸೌಹಾರ್ದತೆಯನ್ನು ಬಯಸುವವನು ನಿಸ್ವಾರ್ಥಿ
   ವಿದ್ಯಾರ್ಥಿಗಳು ಕೂಡಿ ಬಾಳುವ ಜೀವನ
   ಸಮಾನತೆಗೆ ಅದುವೇ ಪರಮ ಪಾವನ
ಸೌಹಾರ್ದ ಬದುಕಿನ ಹರ್ಷ
ಶ್ರಮ ಪಡಬೇಕು ಪ್ರತೀ ನಿಮಿಷ
ಎಲ್ಲಾ ಧರ್ಮವೂ ಬಯಸುವ ಪ್ರೀತಿ
ಅದುವೇ ದೇಶದ ಪ್ರಗತಿಯ ಸ್ಪೂರ್ತಿ 
    ಜಾತಿ ಧರ್ಮದ ಬೇದ ಭಾವ
    ತೊಲಗಲಿ ಎಂಬುದು ನಮ್ಮ ಆಶಾ ಭಾವ
    ಸೌಹಾರ್ದತೆ ಇಲ್ಲದ ಜೀವನ
    ನರಕ ಯಾತನೆಗೆ ಸಮಾನ
ಸೌಹಾರ್ದತೆಗೆ ಮಾಡುವೆನು ಪ್ರಮಾಣ
ಧಕ್ಕೆ ತರುವವರ ತೆಗೆಯುವ ಮಾನ
..................................................... ಶಿಫಾನ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article