-->
ಸ್ವಾತಂತ್ರ್ಯದ ಅಮೃತ ಮಹೋತ್ಸವ - ಕವನ

ಸ್ವಾತಂತ್ರ್ಯದ ಅಮೃತ ಮಹೋತ್ಸವ - ಕವನ

ಆಜಾದಿಕಾ ಅಮೃತ ಮಹೋತ್ಸವ - 2022
ದೇಶವನ್ನು ಕುರಿತು 
ಆದ್ಯಂತ್ ಅಡೂರು
ಬರೆದಿರುವ ಕವನ


ದೇಶಕ್ಕೆ ಸ್ವಾತಂತ್ರ ದೊರೆತು 75 ವರುಷ 
ತುಂಬಿತು ನಮ್ಮಯ ಮನದಿ ಹರುಷ 
ಕೆಂಪು ಕೋಟೆಯಲಿ ಪ್ರಧಾನಿ ಭಾಷಣ 
ಮಾಡಿದೆವು ನಾವಿಲ್ಲಿ ಧ್ವಜಾರೋಹಣ              
   ಗಾಂಧಿಯು ನಮಗೆ ಸ್ವಾತಂತ್ರ್ಯ ಕೊಟ್ಟರು 
   ಭಾರತದ ರಾಷ್ಟ್ರಪಿತರು ಇವರು 
   ಅಹಿಂಸೆಯಿಂದಲೇ ಬ್ರಿಟೀಷರನ್ನು ಓಡಿಸಿದರು 
   ಭವ್ಯ ಭಾರತವನ್ನು ಕಾಪಾಡಿದರು                  
ಸುಭಾಸ ಬೋಸರು, ನೆಹರೂರವರು 
ಆಂಗ್ಲರ ಎದುರು ಯುದ್ಧ ಮಾಡಿದರು 
ನಮಗೆ ಸ್ವಾತಂತ್ರ್ಯ ತಂದುಕೊಟ್ಟರು 
ಜೈ ಹಿಂದ್ ಘೋಷಣೆ ಕೂಗಿದರು                       
   ಮಾಡಿದರು ಬೋಸರು INA ಸೈನ್ಯ 
   ಹಲವಾರು ಯೋಧರು ಕೊಟ್ಟರು ಪ್ರಾಣ 
   ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವು 
   ಎಲ್ಲರು ಒಂದಾಗಿ ಖುಷಿಯಿಂದ ಆಚರಿಸಿದೆವು
..................................... ಆದ್ಯಂತ್ ಅಡೂರು
9ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು, ಕಾಸರಗೋಡು - 671543
********************************************




Ads on article

Advertise in articles 1

advertising articles 2

Advertise under the article