-->
ಪ್ರಕೃತಿ - ಕವನ

ಪ್ರಕೃತಿ - ಕವನ

    ಕಾವ್ಯ ರೈ 10ನೇ ತರಗತಿ 
    ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ 
    ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ        
                  

         ಪ್ರಕೃತಿ - ಕವನ
-------------------------------------------------
ದಿಗಂತದಿ ಕಾರ್ಮೋಡದ ಚಿತ್ತಾರ
ಮಿಂಚು ಗುಡುಗುಗಳು ಆರ್ಭಟಿಸುವ ಅಬ್ಬರ
ರೈತರ ಮನದಲ್ಲಿ ವರುಣನಿಗಾಗಿ ಕಾತರ 
ಮಳೆ ಹನಿಯು ಸ್ಪರ್ಶಿಸಿತು ಇಳೆಯ ಸರಸರ
        ಜುಳು ಜುಳು ಹರಿಯುವ ನದಿಯ ಸಡಗರ 
        ಹಚ್ಚ ಹಸುರಿನ ವನಸಿರಿಯೆ ಸುಂದರ 
       ರೈತನಿಗೆ ಬೆಳೆ ಬೆಳೆಯುವ ಆತುರ 
       ಜಗಕ್ಕೆಲ್ಲಾ ಬೆಳಕ ನೀಡಿದ ನೇಸರ 
ಎಲೆಗಳ ಮೇಲೆ ಇಬ್ಬನಿಯ ವೈಯಾರ
ಖಗ ಮೃಗಗಳ ಕಲರವದ ಇಂಚರ 
ಚಿಗುರೊಡೆಯಿತು ನಮ್ಮ ಗಿಡಮರ 
ತಂಪು ತಂಪಾಯಿತು ನಮ್ಮ ಪರಿಸರ 
.................. ಕಾವ್ಯ ರೈ 10ನೇ ತರಗತಿ 
ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ    

**************************************    

                  

Ads on article

Advertise in articles 1

advertising articles 2

Advertise under the article