-->
ಚುಟುಕುಗಳು

ಚುಟುಕುಗಳು

ಆದ್ಯಂತ್ ಅಡೂರು 
8ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಅಡೂರು ಕಾಸರಗೋಡು ಜಿಲ್ಲೆ , ಕೇರಳ ರಾಜ್ಯ



                  ಚುಟುಕುಗಳು
         **********************
                 ಬಾವುಟ 
   ------------------------------------
ಭವ್ಯ ಭಾರತದ ಸುಂದರ ಬಾವುಟ 
ಮೂರು ಬಣ್ಣಗಳು ತುಂಬಿದ ನೋಟ
ಮಧ್ಯದಲ್ಲಿದೆ ಅಶೋಕ ಚಕ್ರವು
ತ್ಯಾಗ,ಶಾಂತಿ,ಸಮೃದ್ಧಿಯ ದ್ಯೋತಕವು


                   ನೆಹರು 
------------------------------------
ಮಕ್ಕಳ ಪ್ರೀತಿಯ ಚಾಚಾ ನೆಹರು 
ಸ್ವತಂತ್ರ ಭಾರತಕೆ ಹೋರಾಡಿದರು
ಭಾರತದ ಮೊದಲ ಪ್ರಧಾನಿಯಾದರು
ನಮ್ಮ ದೇಶದ ಸೌಭಾಗ್ಯ ಇವರು


             ಕಾರ್ಗಿಲ್ 
-------------------------------------
ಗೆದ್ದಿತು ಭಾರತ ಕಾರ್ಗಿಲ್ ನಲ್ಲಿ
ನಮ್ಮ ಯೋಧರು ಹೋರಾಡಿದರಲ್ಲಿ
ಸೈನಿಕರೆಲ್ಲರೂ ದೇಶ ಪ್ರೇಮಿಗಳು
ಅವರಿಗೆ ನನ್ನಯ ಪ್ರಣಾಮಗಳು


            ಕಲಾಂಗೆ ಸಲಾಂ
----------------------------------------
ವಿಜ್ಞಾನಿ ಎ. ಪಿ. ಜೆ ಅಬ್ದುಲ್ ಕಲಾಂ
ನಿಮಗಿದೋ ಗೌರವದ ಸಲಾಂ
ಭಾರತದ ರಾಷ್ಟ್ರಪತಿ ಆದವರು
ಕ್ಷಿಪಣಿ ತಂತ್ರಜ್ಞಾನದ ಮುಖ್ಯ ಗುರು


               ಲಕ್ಷ್ಮೀಬಾಯಿ
--------------------------------------
ಇವಳು ಮಹಿಳಾ ಸೇನಾಧಿಕಾರಿ
ಕುದುರೆಯ ಮೇಲೆ ಮಾಡುವಳು ಸವಾರಿ 
ಝಾನ್ಸೀ ರಾಣಿ ಲಕ್ಷ್ಮೀ ಬಾಯಿ
ದೇಶ ಕಂಡ ದಿಟ್ಟ ಸಿಪಾಯಿ
..................................ಆದ್ಯಂತ್ ಅಡೂರು 
8ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಅಡೂರು ಕಾಸರಗೋಡು ಜಿಲ್ಲೆ ಕೇರಳ ರಾಜ್ಯ
****************************************


Ads on article

Advertise in articles 1

advertising articles 2

Advertise under the article