
ಸ್ವಾಭಿಮಾನದ ಬದುಕು - ಕಥೆ
Wednesday, July 28, 2021
Edit
ನಂದನ್ ಕೆ ಹೆಚ್
7 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಸ್ವಾಭಿಮಾನದ ಬದುಕು - ಕಥೆ
ಒಂದು ಊರಿನಲ್ಲಿ ಒಬ್ಬ ಯುವಕನಿದ್ದ. ಓದಿ ವಿದ್ಯಾವಂತನಾದ ಅವನು ಕೆಲಸಕ್ಕಾಗಿ ಹುಡುಕಾಡುತ್ತಿದ್ದ. ಆದರೆ ಯಾವುದೇ ನೌಕರಿ ಅವನಿಗೆ ಸಿಗಲಿಲ್ಲ. ಇದಕ್ಕಾಗಿ ಹುಡುಕಾಡುತ್ತಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಸಾಲ ಮಾಡಿ ಒಂದು ಹಸುವನ್ನು ಖರೀದಿಸಿದ. ಹಸು ಮತ್ತು ಕರುವನ್ನು ಸಾಕಿ ಹಸುವಿನ ಹಾಲನ್ನು ಮಾರಿ ಜೀವನ ಸಾಗಿಸುತ್ತಿದ್ದ. ಹೀಗೆ ತಿಂಗಳುಗಳು ಕಳೆದವು. ಬರೀ ಹಾಲು ಮಾರಿ ಬದುಕಲು ಸಾಧ್ಯವಿಲ್ಲ. ಹಾಲಿನ ಜೊತೆಗೆ ಬೆಣ್ಣೆ ಮೊಸರು ತುಪ್ಪ ಇವುಗಳನ್ನು ಮಾಡಿದರೆ ಇನ್ನೂ ಹೆಚ್ಚು ಲಾಭ ಪಡೆಯಬಹುದು ಎಂದು ಯೋಚಿಸಿದ. ಇದಕ್ಕಾಗಿ ಇನ್ನೆರಡು ಹಸುಗಳನ್ನು ಖರೀದಿಸಿ ಕೆಲಸದ ಆಳುಗಳ ಸಹಾಯದಿಂದ ಹಾಲಿನ ಉತ್ಪನ್ನಗಳನ್ನು ಸಹ ತಯಾರು ಮಾಡಿ ಮಾರಲು ಆರಂಭಿಸಿದ. ತಾನು ತಯಾರಿಸುವ ಉತ್ಪನ್ನಗಳನ್ನು ಬಹಳ ಗುಣಮಟ್ಟದಿಂದ ಕಾಯ್ದುಕೊಳ್ಳುತ್ತಿದ್ದ. ಹೀಗಾಗಿ ಅವನ ವ್ಯಾಪಾರ ಬಹಳ ಜೋರಾಗಿ ಶುರುವಾಯಿತು. ಮತ್ತೆ ಇನ್ನೆರಡು ಹಸುಗಳನ್ನು ಖರೀದಿ ಮಾಡಿ ಹಾಲಿನ ಉತ್ಪನ್ನಗಳ ಮಾರಾಟವನ್ನೇ ಉದ್ಯೋಗವನ್ನಾಗಿ ಶುರುಮಾಡಿದ. ಬಹಳಷ್ಟು ಜನರು ಇವನು ತಯಾರಿಸಿದ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಇಡುತ್ತಿದ್ದರು. ಇದನ್ನು ಇವನು ಸಹ ಕಾಯ್ದುಕೊಂಡು ಹೋದ... ತನ್ನ ಜೊತೆಗೆ ಹಲವು ಮಂದಿಗೆ ಕೆಲಸ ನೀಡಿದ. ಸ್ವಾವಲಂಬಿಯಾಗಿ ಬದುಕಿ ಶ್ರೀಮಂತನಾದ.
ನೀತಿ : ದುಡಿಮೆಗೆ ತಕ್ಕ ಫಲ ಸಲ್ಲುತ್ತದೆ
......................................ನಂದನ್ ಕೆ. ಹೆಚ್
7 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ : ಅಶ್ವಿನ್ ಕೃಷ್ಣ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
*********************************************