-->
ಕಾಡಿನ ಮಹತ್ವ - ಕಥೆ

ಕಾಡಿನ ಮಹತ್ವ - ಕಥೆ

 ನಂದನ್ ಕೆ ಹೆಚ್
7ನೇ ತರಗತಿ
ದ.ಕ‌.ಜಿ.ಪಂ.ಉ.ಹಿ.ಪ್ರಾ.ಶಾಲೆ.ಕುದ್ಮಾರು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ


                    ಕಾಡಿನ ಮಹತ್ವ - ಕಥೆ

               ಒಂದು ಹಳ್ಳಿ. ಹಳ್ಳಿಯ ಪಕ್ಕದಲ್ಲಿ ಒಂದು ದಟ್ಟವಾದ ಕಾಡಿತ್ತು. ಜನರೆಲ್ಲಾ ಕಾಡಿನ ಮರಗಳನ್ನು ತಮ್ಮ ಉಪಯೋಗಕ್ಕೆ ಬಳಸುತ್ತಿದ್ದರು. ಕಾಡು ಅವನತಿಯತ್ತ ಸಾಗುತ್ತಿತ್ತು. ಹೀಗಿರುವಾಗ ಒಂದು...... ಒಂದು ಮಳೆಗಾಲ..... ವಿಪರೀತ ಗಾಳಿ , ಮಳೆ , ನೆರೆ ಬಂದು ಹಳ್ಳಿಯ ಜನರು ಬೆಳೆದ ಬೆಳೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಯಿತು. ಪ್ರಗತಿಯತ್ತ ಸಾಗುತ್ತಿದ್ದ ಹಳ್ಳಿ ಮತ್ತೆ ಕಷ್ಟದಲ್ಲಿ ಕಾಲ ಕಳೆಯುವಂತಾಯಿತು. ಈಗವರಿಗೆ ಕಾಡಿನಲ್ಲಿರುವ ಗೆಡ್ಡೆಗೆಣಸುಗಳು ಕಾಡಿನ ಉತ್ಪನ್ನಗಳೇ ಹೊಟ್ಟೆ ತುಂಬಿಸಿ ಕೊಳ್ಳಲು ಸಹಾಯವಾಯಿತು. ಇದನ್ನು ಯೋಚಿಸಿದ ಜನರು ಒಂದು ವೇಳೆ ಆ ಕಾಡು ನಮ್ಮಿಂದ ಪೂರ್ತಿ ನಾಶವಾಗುತ್ತಿದ್ದರೆ ಇವತ್ತು ನಾವು ಹಸಿವಿನಿಂದ ಸಾಯಬೇಕಿತ್ತು . ತಪ್ಪು ಮಾಡಿಬಿಟ್ಟೆವು . ಮರಗಳನ್ನು ಕಡಿಯಬಾರದಿತ್ತು. ಇನ್ನು ಮುಂದೆ ಹೀಗಾಗಬಾರದು ಎಂದು ಆ ಕಾಡಿನಲ್ಲಿ ಇನ್ನಷ್ಟು ಗಿಡಗಳನ್ನು ಬೆಳೆಸಿ ಹಳ್ಳಿಯ ಸುತ್ತ ಪರಿಸರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು. ಮುಂದೆ ಹಳ್ಳಿಯು ಪ್ರಗತಿ ಹೊಂದವುದರ ಜೊತೆ ಕಾಡನ್ನು ರಕ್ಷಣೆ ಮಾಡುತ್ತಾ ಸಂತಸದಿಂದ ಜೀವಿಸತೊಡಗಿದರು. 

ನೀತಿ: ಕಾಡನ್ನು ನಾಶ ಮಾಡಬಾರದು.

ರಚನೆ ನಂದನ್ ಕೆ ಹೆಚ್
7ನೇ ತರಗತಿ
ದ.ಕ‌.ಜಿ.ಪಂ.ಉ.ಹಿ.ಪ್ರಾ.ಶಾಲೆ.ಕುದ್ಮಾರು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ

ಚಿತ್ರ : ಅಖಿಲ್ ಶರ್ಮ 8ನೇತರಗತಿ ಮಂಗಳೂರು

***********************************************

Ads on article

Advertise in articles 1

advertising articles 2

Advertise under the article