
ಗಿಡುಗ ಮತ್ತು ತುಂಟ ಹುಡುಗ - ಚಿತ್ರಕಥೆ -7
ನಿನಾದ್ ಕೈರಂಗಳ್
4 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡುಗ ಮತ್ತು ತುಂಟ ಹುಡುಗ - ಚಿತ್ರಕಥೆ - 7
ಒಂದು ಊರಿನಲ್ಲಿ ಒಬ್ಬ ತುಂಟ ಹುಡುಗ ಇದ್ದನು. ಅವನು ಪ್ರಾಣಿ - ಪಕ್ಷಿಗಳಿಗೆ ತುಂಬಾ ಉಪದ್ರವ ಮಾಡುತ್ತಿದ್ದನು. ಯಾವುದಾದರು ಪಕ್ಷಿ .......ಕೀಟ .... ಹಾವು .... ಕಂಡರೆ ಕಲ್ಲು ಬಿಸಾಡುತ್ತಿದ್ದನು.
ಒಂದು ದಿನ ಗಿಡುಗ ಗೂಡು ಕಟ್ಟುವುದನ್ನು ಆ ಹುಡುಗ ನೋಡುತ್ತಾ ಕುಳಿತಿದ್ದನು. ಸ್ವಲ್ಪ ಹೊತ್ತಿನ ನಂತರ ಒಂದು ಕಲ್ಲು ಹೆಕ್ಕಿ ಗೂಡಿಗೆ ಬಿಸಾಡಿದನು. ಆ ಕಲ್ಲು ಸೀದಾ ಹೋಗಿ ಗಿಡುಗನ ಕಣ್ಣಿಗೆ ಬಿತ್ತು. ಗಿಡುಗನಿಗೆ ತುಂಬಾ ಕೋಪ ಬಂದಿತು. ಅದು ಅವನನ್ನು ಓಡಿಸಿ ಓಡಿಸಿ ಕುಕ್ಕಿತು. ಹೆದರಿದ ಅವನು ಮುಂದೆ ಯಾವುದೇ ಪ್ರಾಣಿ - ಪಕ್ಷಿಗಳಿಗೆ ಕಲ್ಲು ಬಿಸಾಡಲಿಲ್ಲ.
....................................ನಿನಾದ್ ಕೈರಂಗಳ್
4 ನೇ ತರಗತಿ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ