-->
ಧೂಳು ಹಿಡಿದಿದೆ ವೀಣೆ - ಕವನ

ಧೂಳು ಹಿಡಿದಿದೆ ವೀಣೆ - ಕವನ

ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ. ಶಾಲೆ, ಮೂರೂರು,
ಹಿರ್ಗಾನ, ಕಾರ್ಕಳ 
ಉಡುಪಿ ಜಿಲ್ಲೆ


ಧೂಳು ಹಿಡಿದಿದೆ ವೀಣೆ - ಕವನ

ಪ್ರತಿ ವರ್ಷ ರಜೆ ಕಳೆದು
ಶಾಲಾರಂಭವಾಗುವ ಸಮಯ
ಮುಂದಿನ ತರಗತಿಗೆಂದು
ಹರ್ಷಿಸುವ ಸಮಯ

ಆದರೆ ಈ ವರುಷ
ತೆರೆಯಲಿಲ್ಲ ಬಾಗಿಲು
ಧೈರ್ಯವಿಲ್ಲ ಯಾರಿಗೂ
ದಾಟಲು ಮನೆ ಬಾಗಿಲು

ಯಾರದೋ ತಪ್ಪಿಗೆ
ಮಕ್ಕಳಿಗೇಕೆ ಈ ಶಿಕ್ಷೆ..?
ರೋಗದ ಪಾಲಾಯಿತೆಲ್ಲ
ಆಸೆ ಆಕಾಂಕ್ಷೆ..

ಧೂಳು ಹಿಡಿದಿದೆ ಸರಸ್ವತಿಯ
ವಿದ್ಯೆಯೆಂಬ ವೀಣೆಯು
ಮತ್ತೆ ಮೀಟಲಿ ತಂತಿ
ತೆರೆಯಲಿ ಶಾಲೆಯು..

...................ಸುಹಾನ್ ನಾಯಕ್ 7ನೇ ತರಗತಿ
                  ಬಿ.ಎಂ.ಅ.ಹಿ.ಪ್ರಾ. ಶಾಲೆ, ಮೂರೂರು,
                 ಹಿರ್ಗಾನ, ಕಾರ್ಕಳ  ಉಡುಪಿ ಜಿಲ್ಲೆ


Ads on article

Advertise in articles 1

advertising articles 2

Advertise under the article