-->
ಹಸಿರು ಯೋಧರು -16

ಹಸಿರು ಯೋಧರು -16

ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು



ಚಿರ ತನ್ಮಯಿ   ೬ ನೇ ತರಗತಿ
ಸ ಹಿ ಪ್ರಾ ಶಾಲೆ ಹೆಸ್ಕುತ್ತೂರು   
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ

 ಗಿಡದ ಹೆಸರು : ಈರುಳ್ಳಿ ಗಿಡ
         ಈ ವರ್ಷದ ಪರಿಸರ ದಿನಾಚರಣೆಯ ಅಂಗವಾಗಿ ನಾನು ಒಂದು ಈರುಳ್ಳಿ ಗಿಡವನ್ನು ನೆಟ್ಟಿದ್ದೇನೆ.
ಈರುಳ್ಳಿಯನ್ನು ಆಂಗ್ಲ ಭಾಷೆಯಲ್ಲಿ ಆನಿಯನ್ (onion)ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಏಲಿಯಮ್ ಕೆಪಾ (Allium cepa) ಬಹಳ ಮಂದಿ ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಈರುಳ್ಳಿಯು ಮೊದಲಿಗೆ ಕಾಣಿಸಿಕೊಂಡಿದ್ದು ಮಧ್ಯ ಏಷ್ಯಾ ದಲ್ಲಿ. ಮತ್ತೆ ಕೆಲವು ಸಂಶೋಧನೆಗಳ ಪ್ರಕಾರ ಇದನ್ನು ಮೊದಲಿಗೆ ಬೆಳೆದಿದ್ದು ಪಶ್ಚಿಮ ಪಾಕಿಸ್ತಾನ ಹಾಗೂ ಇರಾನಿನಲ್ಲಿ ಎಂಬ ಅಭಿಪ್ರಾಯವಿದೆ.ಪುರಾತನ ಈಜಿಪ್ಟಿನ ಚಿತ್ರಲಿಪಿಗಳಲ್ಲಿ ಈರುಳ್ಳಿಯ ಚಿತ್ರವೂ ಇದೆ.ಅದೇ ಕಾಲಘಟ್ಟದಲ್ಲಿ ಈಜಿಪ್ಟಿಯನ್ ಮಮ್ಮಿಗಳ ಒಳಗೂ ಈರುಳ್ಳಿಗಳು ಇರುವುದು ಕಂಡುಬಂದಿವೆ.   ಈರುಳ್ಳಿಯಲ್ಲಿ ವಿಟಮಿನ್ ಸಿ, ನಾರು ಪದಾರ್ಥ ಹಾಗೂ ಫ಼ೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಇವಲ್ಲದೆ ಕ್ಯಾಲ್ಸಿಯಂ ಕಬ್ಬಿಣ ಹಾಗೂ ಪ್ರೋಟೀನ್ ಗಳು ಈರುಳ್ಳಿ ಯಲ್ಲಿವೆ.
ಈರುಳ್ಳಿ ಕೊರೋನಾ ವೈರಸ್ ತಡೆಗಟ್ಟಲು ಕೂಡ ಸಹಕಾರಿ. ಪ್ರತಿನಿತ್ಯ ಈರುಳ್ಳಿಯನ್ನು ಅಗಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಕೋವಿಡ್ ಮುಕ್ತರು!



ಸರ್ವಜಿಷ್ಣು   5 ನೇ ತರಗತಿ
ಸ ಹಿ ಪ್ರಾ ಶಾಲೆ ಹೆಸ್ಕುತ್ತೂರು   
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ

 ಗಿಡದ ಹೆಸರು : ಮಾವಿನ ಗಿಡ
ಮಾವಿನ ಎಲೆಯು ಮಧುಮೇಹ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತದೆ.
ಮೂತ್ರಕೋಶದಲ್ಲಿನ ಕಲ್ಲು, ಉಸಿರಾಟದ ಸಮಸ್ಯೆ, ಅತಿ ಬೇಧಿ, ಕಿವಿ ನೋವು, ಮಾವಿನ ಎಲೆಯ ಬೂದಿಯನ್ನು ಸುಟ್ಟ ಗಾಯಕ್ಕೆ ಮತ್ತು ಗ೦ಟಲಿನ ಸಮಸ್ಯೆಯನ್ನು ನಿಯಂತ್ರಿಸಲು ಬಳಸುತ್ತೇವೆ. ಭಾರತದ ರಾಷ್ಟ್ರೀಯ ಹಣ್ಣಾಗಿದೆ ಮಾವು. ಬಹೂಪಯೋಗಿ ಮಾವಿನ ಗಿಡವನ್ನು ಈ ಜೂನ್ ೫ ವಿಶ್ವ ಪರಿಸರ ದಿನಾಚರಣೆಯಂದು ನೆಟ್ಟ ಕುರಿತು ನನಗೆ ಹೆಮ್ಮೆ ಮತ್ತು ಗೌರವವಿದೆ.



ಪವನ್ ಕುಮಾರ್ ಕೆ
ಸರಕಾರಿ ಪ್ರೌಢಶಾಲೆ ಐವರ್ನಾಡು
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ



ಧ್ಯಾನ್ ಪ್ರಭು. ಎಂ   7 ನೇ ತರಗತಿ                              
ಜವಾಹರ ನವೋದಯ ವಿದ್ಯಾಲಯ
ಮುಡಿಪು, ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ  ಜಿಲ್ಲೆ

ಗಿಡದ ಹೆಸರು : ಬೇವಿನ ಗಿಡ
          ವೇದ ಸಾಹಿತ್ಯದಲ್ಲಿ ಉಲ್ಲೇಖತವಾಗಿರುವಂತೆ ಬೇವಿನ ಮರದ ಪ್ರತಿ ಭಾಗ ಕೂಡ ಉಪಯುಕ್ತಕಾರಿ. ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ನೀಡುತ್ತದೆ. ಬೇವು ಕಹಿಯಾದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ.
ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರುವುದಿಲ್ಲವೆಂಬುದು ಹಿರಿಯರ ಮಾತು. ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು.
ಕಡಿಮೆ ಮಳೆ ಬೀಳುವ ಮತ್ತು ಬಿಸಿಲಿನ ತಾಪ ಅಧಿಕವಾಗಿರುವ ಪ್ರದೇಶದಲ್ಲಿ ಬೇವಿನ ಮರ ಹುಲುಸಾಗಿ ಬೆಳೆಯುತ್ತದೆ. ಬೇವಿನ ಮರಗಳ ಮೇಲಿಂದ ಬೀಸುವ ಗಾಳಿ, ಬಿಸಿಲಿನ ತಾಪದಿಂದ ಬಳಲಿದ ದೇಹಕ್ಕೆ ತಂಪನ್ನು ನೀಡುತ್ತದೆ.



ಸಹೋಜ್ 4ನೇ ತರಗತಿ ಮತ್ತು 
ಸುಕೃತಿ ನಾಲ್ಕು ವರ್ಷ
ಮರೋಳಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀತಾಫಲ ಗಿಡ




ಪ್ರೀತಂ   ಏಳನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ - ಇರಾ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು :  ಬೇವಿನ ಗಿಡ
    ಬೇವಿನ ಎಣ್ಣೆಯನ್ನು ರೋಗಗ್ರಸ್ಥ ಚರ್ಮದ ಮೇಲೆ ಮಾಲೀಶ್ ಮಾಡುವುದರಿಂದ ಚರ್ಮ ರೋಗ ನಿವಾರಣೆ ಆಗುತ್ತದೆ. ಬೇವಿನ ಮರದ ತೊಗಟೆಯನ್ನು ಕಲ್ಲಿನ ಮೇಲೆ ತೇದು ಗಂಧವನ್ನು ತೆಗೆದು ಗಾಯವನ್ನು ಬೇವಿನ ಸೊಪ್ಪಿನ ಕಷಾಯದಿಂದ ತೊಳೆದು ಈ ಗಂಧವನ್ನು ನಾಲ್ಕು ದಿನಗಳ ಕಾಲ ಒಂದೆರಡು ಬಾರಿ ಲೇಪಿಸಿದರೆ ಗಾಯ ಗುಣವಾಗುವುದು. ಬೇವಿನ ಕಷಾಯದಿಂದ ತಲೆ ಸ್ನಾನ ಮಾಡುವುದರಿಂದ ತಲೆಗೂದಲು ಉದುರುವುದು ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ. ಬೇವಿನ ಎಲೆಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಅದನ್ನು ಕೂದಲಿಗೆ ಹಚ್ಚಿ ಸ್ವಲ್ಪ ಗಂಟೆಗಳ ನಂತರ ಬೇವಿನ ಸೊಪ್ಪಿನ ಕಷಾಯದಿಂದ ತಲೆಯನ್ನು ಆಗಾಗ್ಗೆ ತೊಳೆದರೆ ತಲೆಯಲ್ಲಿರುವ ಹೇನು ನಿವಾರಣೆಯಾಗುತ್ತದೆ.



ನಿಹಾರಿಕಾ 4 ನೇ ತರಗತಿ
ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್
ಸುರತ್ಕಲ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹೆಸರು ಕಾಳಿನ ಗಿಡ




ಕೃತಿಕಾ. ಕೆ   8 ನೇ ತರಗತಿ
ಸರಕಾರಿ ಪ್ರೌಢಶಾಲೆ
ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಹಣ್ಣಿನ ರಾಜ ಮಾವು
      ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಮಾವು ಅತಿ ಹೆಚ್ಚು ವಿಟಮಿನ್ ಗಳನ್ನು ಹೊಂದಿದೆ.ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ .ಅಲ್ಲದೆ ಮಾವಿನ ಮಾವಿನಲ್ಲಿ ರಂಜಕ 4 %, 156 ಮಿ.ಗ್ರಾಂ ಮತ್ತು ಮ್ಯಾಗ್ನಿಷಿಯಂ 2% ಪ್ರತಿ 9 ಮಿ.ಗ್ರಾಂ ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ. 
ಕ್ಯಾನ್ಸರ್ ಮತ್ತು ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ.  ಮಾವಿನಲ್ಲಿ ಪೆಕ್ಟಿನ್ ಅತ್ಯಧಿಕ ಪ್ರಮಾಣದಲ್ಲಿರುತ್ತದೆ .ಇದು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇಲ್ಲಿರುವ ಇದರಲ್ಲಿರುವ ಪೆಕ್ಟಿನ್ ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. 
     

       

ರಕ್ಷಿತ 9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ ಮುರುವಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಚಕ್ಕೋತ ಹಣ್ಣಿನ ಗಿಡ




ವೈಷ್ಣವಿ ಎಸ್ ತುಂಗ      3 ನೇ ತರಗತಿ 
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಕೇಪಳ
        ಇದು ಹೆಚ್ಚು ಕೊಂಬೆಗಳನ್ನು ಹೊಂದಿರುವ ಗಿಡ. ಇದರ ಎಲೆಗಳು ಉದ್ದವಾಗಿ ಆಯತಾಕಾರವಾಗಿ ಇದೆ ಎಂದು ಹೇಳಬಹುದು. ಈ ಎಲೆಗೆ ತೊಟ್ಟಿನ ಭಾಗ ಇರುವುದಿಲ್ಲ. ಕೇಪಳ ಹೂವಿನಲ್ಲಿ ಅನೇಕ ವಿಧದ ಬಣ್ಣದ ಹೂವುಗಳಿವೆ.ಇದರ ಮೊಗ್ಗುಗಳು ಚೂಪಾಗಿವೆ. ಇದರ ಹೂವಿನ ಆಕಾರ ಕೊಳವೆ ಆಕಾರದಲ್ಲಿದೆ. 




ಆದಿತ್ಯ ಎಮ್ ಕೆ   3ನೇ ತರಗತಿ 
ಚಿನ್ಮಯ ಶಾಲೆ ಕದ್ರಿ ರಸ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ




ಸಾಹಿತ್ಯಎಮ್ ಕೆ . 8 ನೇ ತರಗತಿ 
ಚಿನ್ಮಯ ಶಾಲೆ ಕದ್ರಿ ರಸ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ



ಕೀರ್ತನ್ 2 ನೇ ತರಗತಿ 
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಕರಿಬೇವಿನ ಗಿಡ




ತನ್ಯ    4 ನೇ ತರಗತಿ 
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಕೇಪುಳದ  ಗಿಡ





ಧನುಶ್ರೀ 7 ನೇ ತರಗತಿ 
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಹಲಸಿನ ಗಿಡ





Ads on article

Advertise in articles 1

advertising articles 2

Advertise under the article