-->
ಹಸಿರು ಯೋಧರು -10

ಹಸಿರು ಯೋಧರು -10

ಜೂನ್ - 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರ ಲೇಖನಮಾಲೆ 
ಮಕ್ಕಳ ಜಗಲಿಯ ಹಸಿರು ಯೋಧರು


ಮಾನ್ಯಶ್ರೀ    10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ  
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ದೊಡ್ಡಪತ್ರೆ
     ದೊಡ್ಡ ಗುಣಗಳನ್ನು ಹೊಂದಿರುವ ದೊಡ್ಡಪತ್ರೆ ಇದನ್ನು ಸಾಂಬಾರು ಸೊಪ್ಪು ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Plectranthus amboinicus ಆಗಿದೆ. ಇದನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಾರೆ. ದೊಡ್ಡಪತ್ರೆ ಗಿಡದ ಎಲೆಗಳು ಅಚ್ಚ ಹಸಿರು ಬಣ್ಣದಲ್ಲಿದ್ದು ದಪ್ಪವಾಗಿರುತ್ತದೆ, ಹಾಗೂ ಕಡು ಸುವಾಸನೆಯನ್ನು ಹೊಂದಿರುತ್ತದೆ. ದೊಡ್ಡಪತ್ರೆಗಿಡವು ಮೃದುವಾಗಿದ್ದು, ರೆಂಬೆ ಮತ್ತು ಹೂವುಗಳು ಚಿಕ್ಕದಾಗಿರುತ್ತದೆ. ಇದನ್ನು ಆಹಾರ ಪದಾರ್ಥಗಳಲ್ಲಿ ತಂಬುಳಿ, ಗೊಜ್ಜು, ಚಟ್ನಿ, ಪೋಡಿ ಮಾಡಲು ಉಪಯೋಗಿಸುತ್ತಾರೆ. ಇದರ ಬಳಕೆಯಿಂದ ಅನೇಕ ರೋಗಗಳನ್ನು ನಿವಾರಿಸಬಹುದಾಗಿದೆ.




ಮಾನ್ ಹೆಚ್ ಶೆಟ್ಟಿ 5 ನೇ ತರಗತಿ 
ಸುದಾನ ವಸತಿಯುತ ಶಾಲೆ ಪುತ್ತೂರು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ನುಗ್ಗೆ ಗಿಡ




ಸ್ಕಂದ ಶೆಣೈ      ತರಗತಿ : 3    
ಶಾಲೆ ವಿಳಾಸ : ಎಸ್ . ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು :  ಹಾಗಲಕಾಯಿ ಗಿಡ
     ಹಾಗಲಕಾಯಿ ತಿನ್ನಲು ಕಹಿ. (ಬಿಟರ್ ಗೌರ್ಡ್)
ಹಾಗಲಕಾಯಿ ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರ ತರಕಾರಿಗಳಲ್ಲಿ ಇದನ್ನು ಬಳಸುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ನಾರಿನಾಂಶ ಹೊಂದಿದೆ. ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುತ್ತದೆ. ಮಧುಮೇಹವನ್ನು ಕಡಿಮೆ ಮಾಡುತ್ತದೆ
ಮಲಬದ್ಧತೆಯನ್ನು ತಡೆಗಟ್ಟುತ್ತದೆ.  ತೂಕ ಕಡಿಮೆ ಮಾಡುತ್ತದೆ.  ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ
ರಕ್ತವನ್ನು ಶುದ್ಧಿಕರಿಸುತ್ತದೆ





ಮನೀಶ್   ಹತ್ತನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಮೂಡಬಿದ್ರೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಪಪ್ಪಾಯಿ ಗಿಡ




ಹೆಸರು.ಭೂಷಣ್ ಶೆಟ್ಟಿ 
ತರಗತಿ.9A
ಶಾಲೆ.ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಹಲಸಿನ ಗಿಡ
      ನಾನು ನಮ್ಮ ಮನೆಯ ಹತ್ತಿರ ಹಲಸಿನ ಗಿಡ ನೆಟ್ಟಿದ್ದೇನೆ. ಹಲಸಿನ ಗಿಡದಿಂದ ನಮಗೆ ನೆರಳು ಸಿಗುತ್ತದೆ. ಮತ್ತು ಅದರಲ್ಲಿ ಹಲಸಿನ ಕಾಯಿ ಸಿಗುತ್ತದೆ. ಮತ್ತು ಹಲಸಿನ ಕಾಯಿ ತಿನ್ನಲು ಬಹಳ ರುಚಿಯಾಗಿದೆ.ಮತ್ತು ಅದರಿಂದ ನೆರಳು ಸಿಗುತ್ತದೆ. 





ಈತನ್ ಡಿ'ಸೋಜ   3 ನೆಯ ತರಗತಿ
ಸಂತ ಲೋರೆನ್ಸ್ ಆಂಗ್ಲ ಮಾಧ್ಯಮ ಶಾಲೆ 
ಬೊಂದೆಲ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ತುಳಸಿ ಗಿಡ
  ತುಳಸಿ ಲಾಮಿಯಾಸಿಯೆ ಸಸ್ಯ ಜಾತಿಯ, ಎಳೆಯದಾದ ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯವಾಗಿದೆ. 
     "ಮೂಲಿಕೆಗಳ ರಾಣಿ" ತುಳಸಿ ತನ್ನ ಗುಣಪಡಿಸುವ ಅಧಿಕಾರಕ್ಕೆ ಹೆಸರುವಾಸಿಯಾಗಿದೆ. ತುಳಸಿಯನ್ನು ವಿವಿಧ ಚರ್ಮದ ಅಸ್ವಸ್ಥಗಳು, ಸೋಂಕುಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. 
   ಎಲೆಗಳು ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡಲು ನೆರವಾಗುವುದು ಮತ್ತು ಉಸಿರುಗಟ್ಟುವ ಸಮಸ್ಯೆ ನಿವಾರಣೆ ಮಾಡುವುದು.



   
ವಿದ್ಯಾರ್ಥಿಯ ಹೆಸರು : ಆದಿತ್ಯ. ಎನ್. ಕರ್ಕೇರ.
ತರಗತಿ : 3     ದ ಕ ಜಿ ಪ ಹಿ ಪ್ರಾ. ಶಾಲೆ ಬ್ರಹ್ಮರಕೂಟ್ಲು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಪರಿಚಯ : ಬಾಳೆಗಿಡ.
        ಉಪಯೋಗ : ಇದು ಒಂದು ಪೌಷ್ಟಿಕ ಯುಕ್ತ ಗಿಡ . ಬಾಳೆ ಎಲೆಯನ್ನು ಊಟ ಮಾಡಲು ಉಪಯೋಗಿಸುತ್ತಾರೆ. ಇದರ ಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ದಿಂಡನ್ನು ಪದಾರ್ಥ ಮಾಡುತ್ತಾರೆ.



ಹರ್ಷಣ್   3 ನೇ ತರಗತಿ
ಎಸ್. ವಿ. ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪೇರಳೆ ಗಿಡ



ರೆಹನಾ ಒಂಬತ್ತನೇ ತರಗತಿ ರೋಸಾ ಮಿಸ್ತಿಕಾ ಹೈಸ್ಕೂಲ್ ಕಿನ್ನಿಕಂಬಳ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ


ಕಾವ್ನಿ ಎಸ್ ಶೆಟ್ಟಿ ಮೂರನೇ ತರಗತಿ 
ಎಸ್ ವಿ ಎಸ್ ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಅಲೋವೆರಾ ಮತ್ತು ಪೈನಾಪಲ್




ಮನ್ವಿತ್      4ನೇ ತರಗತಿ 
  ಎ ಸ್. ವಿ. ಎಸ್.  ದೇವಳ     ಇಂಗ್ಲೀಷ ಮೀಡಿಯಂ ಶಾಲೆ ಬಂಟ್ಟಾಳ.
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ  
                    



Ads on article

Advertise in articles 1

advertising articles 2

Advertise under the article