-->
ಜೀವನಯಾನ - ಕವನ

ಜೀವನಯಾನ - ಕವನ

         ಯುವರಾಜ್ 10 ನೇ ತರಗತಿ
         ಸ.ಪ್ರೌ.ಶಾಲೆ ,ಕಡೇಶಿವಾಲಯ
         ಬಂಟ್ವಾಳ ತಾಲೂಕು



       ಜೀವನ ಯಾನ - ಕವನ

ದೋಣಿಯೊಂದು ಕನಸುಗಳ ಹೊತ್ತು
ಸಾಗುತಲಿತ್ತು ನದಿಯಲಿ,

ನದಿ ಕೂಡ ಹರಿಯುತಲಿತ್ತು
ತೀರವಿರುವ ದಿಶೆಯಲಿ...!

ಕಂಪನು ಸೂಸುತಲಿತ್ತು
ತಂಗಾಳಿ ,
ಬಿರುಗಾಳಿ ಬೀಸಿತು
ದೋಣಿ ಬರಲು 
ನದಿಯ ಮಧ್ಯದಲ್ಲಿ..!

ಕನಸ ಹೊತ್ತ ದೋಣಿ
ಮುಳುಗಿತು ನದಿಯಲಿ..!
ಕನಸೆಲ್ಲ ನೆಲ ಕಚ್ಚಿತು
ನಾವಿಕನೇ ಇರಲಿಲ್ಲ
ಆ ದೋಣಿಗೆ,ತಲುಪುವುದು ತೀರವ ಇನ್ನೆಲ್ಲಿ....!!!

ನಮಗೂ ಹಾಗೆ
ನಮ್ಮ ಬಾಳ ನೌಕಾ ಯಾನಕೆ
ಗುರುವಿನ ಮಾರ್ಗದರ್ಶನವೇ ದಿಕ್ಸೂಚಿ.....
ಗುರಿಯಿರಲಿ ಕಣ್ಣಮುಂದೆ
ಗುರುವಿರಲಿ ನಮ್ಮ ಜೊತೆಯಲಿ...
ಯಶಸ್ಸು ದೊರೆಯುವುದು ನೌಕೆ ತೀರವ ಸೇರುವುದು...!!

        ಯುವರಾಜ್ 10 ನೇ ತರಗತಿ
         ಸ.ಪ್ರೌ.ಶಾಲೆ ,ಕಡೇಶಿವಾಲಯ
         ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article