-->
ಗಣರಾಜ್ಯ - ಕವನ

ಗಣರಾಜ್ಯ - ಕವನ

      ಅನುಲಕ್ಷ್ಮಿ 9ನೇ ತರಗತಿ
      ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
      ಬಂಟ್ವಾಳ ತಾಲೂಕು

          ಗಣರಾಜ್ಯ ಸಂಭ್ರಮ - ಕವನ

ಗಣರಾಜ್ಯ ಬಂದಿತು ಈ ದಿನ  
ಕಾನೂನುಗಳು ಜಾರಿಗೆ ಬಂದ ಈ ದಿನ...!

    ಸ್ವತಂತ್ರಕ್ಕೆ ಪರಿಪೂರ್ಣ ಅರ್ಥ ಕೊಟ್ಟ ದಿನ 
    ಸಂವಿಧಾನದ ಅರ್ಥ ಪರಿಚಯಿಸಿದ ದಿನ...!!

ಪ್ರಜಾಪ್ರಭುತ್ವದ ಹರಿಕಾರ 
ದೀನದಲಿತರ ಪಾಲಿನ ಧೀರ
ಸಂವಿಧಾನ ರಚನಾಕಾರ
ಅವರೇ ಡಾ|ಬಿ.ಆರ್.ಅಂಬೇಡ್ಕರ...!!

      ದೀನದಲಿತರಿಗೆ ಶಿಕ್ಷಣ ಕಲ್ಪಿಸಿಕೊಟ್ಟ ಶೂರ..
      ಇವರೇ ಇಂದಿನ ಗಣರಾಜ್ಯದ ಶಿಖರ...
      ನಮ್ಮೆಲ್ಲರ ಹೃದಯದಲ್ಲಿ ಮೊಳಗಲಿ 
      ನಮ್ಮ ಭಾರತ !!

ಇಲ್ಲಿರುವುದೆಲ್ಲಾ ಸತ್ಯ ಮಾರ್ಗದ ಸಂಕೇತ...
ಬಂಧು-ಬಳಗ ಕೂಡಿ ಆಚರಿಸುವ 
ಗಣರಾಜ್ಯದ ದಿನ
ದೇಶಕ್ಕೆ ಗಣತಂತ್ರವಾದ ಈ
ಸುಂದರ ದಿನ...!!

     ದೆಹಲಿಯಲ್ಲಿ ನಡೆಯುವ ಪರೇಡಿನಲ್ಲಿ  
     ಸೈನಿಕರ ಶಿಸ್ತು !
     ಹಾಗೆಯೇ ಅಲ್ಲಿರುವ ಪೋಲೀಸರ ಗಸ್ತು ...!!

ನೋಡಲು ಬಹಳ ಚಂದದಲಿ
ಕಣ್ಣುಗಳು ತುಂಬಿದೆ ಆನಂದದಲಿ.. !

     ಈ ಗಣರಾಜ್ಯೋತ್ಸವವನ್ನು ದೇಶಕಾಯುವ
     ಯೋಧರಿಗೆ ಅರ್ಪಿಸುವ...!
     ಹಾಗೆಯೇ ಅವರಿಗೆ ಶತಶತ ನಮನಗಳನ್ನು
     ಸಲ್ಲಿಸುವ...!!

ದೇಶವ ಕಾಯುವ... ವೀರಯೋಧರಿಗೆಲ್ಲ  
ಶತಕೋಟಿ ನಮನ...
ಅವರಿಗೆ ನಾನು ಅರ್ಪಿಸುವೆ 
ಈ ಕವನ...!!!
             
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article