ಜಗಲಿ ಕಟ್ಟೆ : ಸಂಚಿಕೆ - 73
Sunday, June 8, 2025
Edit
ಜಗಲಿ ಕಟ್ಟೆ : ಸಂಚಿಕೆ - 73
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಶಾಲಾರಂಭದ ದಿನಗಳು ಸಾಗುತ್ತಾ ಇದೆ. ಪುಸ್ತಕ ಚೀಲ ಹೆಗಲಿಗೇರಿಸಿ ಶಾಲೆಗೆ ಹೋಗುವ ದೃಶ್ಯ ಬಹಳ ಸುಂದರವಾಗಿ ಕಾಣುತ್ತಿದೆ. ಬಣ್ಣ ಬಣ್ಣದ ಹೂಗಳ ಹಾಗೆ ಶಾಲೆಗೆ ಹೊರಟ ಮಕ್ಕಳ ಸಾಲು ಮನೋಹರ. ಜೊತೆ ಜೊತೆಗೆ ಮಳೆಯ ಸಿಂಚನದಿಂದ ಭೂಮಿಯೂ ತಂಪಾಗಿದೆ.
ಶಾಲಾ ಪ್ರಾರಂಭೋತ್ಸವಕ್ಕೆ ತುಂಬಾ ಮಳೆ... ನದಿ ಹೊಳೆಗಳಲ್ಲಿ ತುಂಬಾ ನೀರು ಹರಿದುದರಿಂದ ಕೆಲವು ಭಾಗಗಳಲ್ಲಿ ರಜೆಯೂ ಘೋಷಣೆ ಆಯಿತು. ಆರಂಭಕ್ಕೆ ರಜೆ ಘೋಷಣೆ ಯಾದುದರಿಂದ ಹೆಚ್ಚಿನ ಮಕ್ಕಳಿಗೆ ನಿರಾಸೆಯು ಆಯ್ತು. ಕೆಲವರು ಖುಷಿಪಟ್ಟಿದ್ದೂ ಇದೆ.
ರಜೆ ಸಿಕ್ಕಾಗ ಖುಷಿ ಪಡುವ ಮಕ್ಕಳು ನಿಷ್ಕ್ರಿಯತೆಗೆ ಜಾರುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಕೆಲವೊಮ್ಮೆ ಕಾಡುವುದಿದೆ. ಸುಮ್ಮನೆ ಕಾಲ ಹರಣ ಮಾಡುತ್ತಾರೆನ್ನುವ ಪೋಷಕರ ಮತ್ತು ಶಿಕ್ಷಕರ ಪ್ರಶ್ನೆಯ ಮೇಲೆ ಚಿಂತಿಸುವುದಾದರೆ ಹಲವಾರು ಉತ್ತರಗಳು ದೊರೆಯಬಹುದು. ಆದರೂ ರಜೆಯ ಸಂದರ್ಭಗಳಲ್ಲಿ ಯಾವುದೇ ಚಟುವಟಿಕೆಯಲ್ಲಿ ನಿರತವಾಗದೆ ಯಾವುದೇ ಲಾಭವನ್ನು ಪಡೆದುಕೊಳ್ಳಲಾಗದ ಸಮಯವನ್ನು ನಿಷ್ಪ್ರಯೋಜಕವೆನ್ನಬಹುದು. ಈ ಬಗ್ಗೆ ಕಾರಣ ತಿಳಿಯ ಹೊರಟರೆ ಹಲವಾರು ಇರಬಹುದು. ಆದರೆ ಚಟುವಟಿಕೆಯಲ್ಲಿ ನಿರತವಾಗುವಂತೆ ಆಸಕ್ತಿಕರವಾದ ವಾತಾವರಣವನ್ನು ನಿರ್ಮಿಸಿ ಕೊಡಬೇಕಾದದ್ದು ಹಿರಿಯರಾದ ನಮ್ಮ ಕರ್ತವ್ಯ ಹಾಗೂ ಅಷ್ಟೇ ಮಹತ್ವದ್ದು.
ಇತ್ತೀಚೆಗೆ ಮಕ್ಕಳ ಆಪ್ತ ಸಮಾಲೋಚಕರಾದ ಡಾ. ಗುರುರಾಜ್ ಇಟಗಿಯವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಡೆದಿತ್ತು. ಮಕ್ಕಳ ಜಗಲಿಯಲ್ಲಿ 'ಓ ಮುದ್ದು ಮನಸೇ' ಅಂಕಣದಲ್ಲಿ ಬರೆಯುತ್ತಿದ್ದ ಬರಹಗಳ ಗೊಂಚಲು ಹಾಗೂ 'ಸರ್ ಐ ಯಾಮ್ ಅಲೋನ್' ಎನ್ನುವ ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು. ಶಿಕ್ಷಕರು ಮತ್ತು ಪೋಷಕರು ಹಾಗೂ ಮಕ್ಕಳ ಹಿತಚಿಂತಕರು ಖಂಡಿತವಾಗಲೂ ಓದಬೇಕಾದ ಪುಸ್ತಕ.
ಈ ಕಾರ್ಯಕ್ರಮದಲ್ಲಿ ಡಾ. ವಿರೂಪಾಕ್ಷ ದೇವರಮನೆ ಯುವರು ಮುಖ್ಯ ಅತಿಥಿಗಳಾಗಿ ಪುಸ್ತಕ ಬಿಡುಗಡೆಗೊಳಿಸಿದ್ದರು. ಈ ವೇದಿಕೆಯಲ್ಲಿ ನನಗೂ ಪುಸ್ತಕವನ್ನು ಪರಿಚಯಿಸುವ ಅವಕಾಶವಿದ್ದುದರಿಂದ ಸಮಾರಂಭವನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಈ ಸಂದರ್ಭದಲ್ಲಿ ಡಾ. ವಿರೂಪಾಕ್ಷ ದೇವರಮನೆಯವರು ಒಂದು ಪ್ರಸ್ತಾಪವನ್ನು ನನ್ನ ಮುಂದಿಟ್ಟರು. ಮಕ್ಕಳ ಜಗಲಿಯ ಮೂಲಕ ಎಲ್ಲಾ ಪೋಷಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಕ್ಕಳ ಕಲಿಕಾ ನ್ಯೂನತೆಗಳು, ಮಕ್ಕಳ ವರ್ತನೆಗಳು, ಹಾಗೂ ಮಕ್ಕಳ ಇನ್ನಿತರ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಉತ್ತರಿಸುವ ಪ್ರಯತ್ನವನ್ನು ಮಾಡಬಹುದೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದೊಂದು ಅತ್ಯುತ್ತಮ ಬೆಳವಣಿಗೆ ಹಾಗೂ ಇದರ ಮುಂದಿನ ಪ್ರಯತ್ನವನ್ನು ನಿಮ್ಮೆಲ್ಲರ ಸಹಕಾರದೊಂದಿಗೆ ನಡೆಸುವ ಅಭಿಪ್ರಾಯ ಕೂಡ ನಮ್ಮದು.
ಇಂದಿನ ವಿಶೇಷವಾಗಿ ಮಕ್ಕಳ ಜಗಲಿಯ ಹಿತೈಷಿ ಮಾರ್ಗದರ್ಶಕರು ಶ್ರೀ ಶ್ರೀರಾಮ ಮೂರ್ತಿಯವರು. ತನ್ನ 100ನೇ ಸಂಚಿಕೆಯ ಅನಿಸಿಕೆಯನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದಾರೆ... ಅವರ ನಿರಂತರ ಸಹಕಾರ ಪ್ರೋತ್ಸಾಹ ಹಾಗೂ ಬರಹಗಾರರಿಗೆ ನೀಡುತ್ತಿರುವ ಸ್ಪೂರ್ತಿಯನ್ನು ಸದಾ ಸ್ಮರಿಸುತಿದ್ದೇವೆ...
ಮಕ್ಕಳ ಜಗಲಿಯಲ್ಲಿ ನಡೆಸಲಾದ ಕಥೆ - ಕವನ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯ ಬಹುಮಾನಗಳನ್ನು ನೀಡುವ ಕಾರ್ಯದಲ್ಲಿ ಇದ್ದೇವೆ. ಅದರ ಹಿಂದಿರುವ ಸುಮಾರು ಕೆಲಸ ಕಾರ್ಯಗಳಿಂದಾಗಿ ಸಮಯಾವಕಾಶ ಕೂಡ ನಮಗೆ ಅನಿವಾರ್ಯವಾಗಿದೆ. ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ನಮ್ಮದು.
ಮಕ್ಕಳ ಜಗಲಿಯಲ್ಲಿ ಬರುವ ಪ್ರತಿಯೊಂದು ಅಂಕಣಗಳನ್ನು ಬಹಳ ಪ್ರೀತಿಯಿಂದ ಓದುತ್ತಿರುವ ನೀವು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಬರೆದು ಕಳುಹಿಸಿ.
ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಎಂದಿನಂತೆ ಮಕ್ಕಳು ನಿಮ್ಮ ಎಲ್ಲಾ ರೀತಿಯ ಬರಹಗಳು ಹಾಗೂ ಚಿತ್ರ- ಕ್ರಾಫ್ಟ್ ಗಳ ಫೋಟೋಗಳನ್ನು ನಮಗೆ ಕಳುಹಿಸಿ.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 72 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಲ್ಲರಿಗೂ ನಮಸ್ಕಾರಗಳು,
ನಮ್ಮ ಶರೀರ ನಮ್ಮ ಇಂದ್ರಿಯಗಳು ಹಾಗೂ ಬುದ್ಧಿ ಎಲ್ಲಕ್ಕಿಂತ ಮಿಗಿಲಾದ ಸಂಪತ್ತು ಎಂಬುದನ್ನು ಬಹಳ ಸುಂದರವಾಗಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ಅವರು ತಿಳಿಸಿದ್ದಾರೆ. ಸುಂದರ ಲೇಖನ. ಧನ್ಯವಾದಗಳು ಸರ್.
ರಮೇಶ್ ಸರ್ ರವರಿಂದ ಈ ವಾರದಲ್ಲಿ ಮೂಡಿ ಬಂದ ಅದ್ಭುತ ಪ್ರತಿಭೆ ಹಾಗೂ ಕಲಾವಿದೆ ಕುಮಾರಿ ಶ್ವೇತಾಳ ಕುರಿತಾದ ಲೇಖನ ತುಂಬಾ ಮುದ ನೀಡಿತು. ಕಲಾವಿದರನ್ನು ಗುರುತಿಸುವ ಕಳಕಳಿಗೆ ವಂದನೆಗಳು ಸರ್.
ಅಲಂಕಾರಿಕ ಗಿಡವಾಗಿ ಬಳಸುವ ಅಂಥೋರಿಯಂ ಸಸ್ಯದ ಪರಿಚಯದೊಂದಿಗೆ ಅದರ ವಿವಿಧ ಪ್ರಭೇದಗಳ ಕುರಿತಾಗಿ ವಿವರವಾದ ಉತ್ತಮ ಮಾಹಿತಿ ಈ ಸಲದ ಸಂಚಿಕೆಯಲ್ಲಿ ವಿಜಯಾ ಮೇಡಂ ರವರಿಂದ.
ಉಸಿರಾಟ ಎನ್ನುವುದು ಒಂದು ರಾಸಾಯನಿಕ ಪ್ರಕ್ರಿಯೆ. ಆದರೂ ಜೀವಕೋಶದಲ್ಲಿ ನಡೆಯುವ ಉಸಿರಾಟ ಕ್ರಿಯೆ ಹಾಗೂ ಉಸಿರಾಟದ ನೈಜ ರಾಸಾಯನಿಕ ಕ್ರಿಯೆಗಳಿಗಿರುವ ಭಿನ್ನತೆಯನ್ನು ಮನ ಮುಟ್ಟುವಂತೆ ತಿಳಿಸಿದ್ದಾರೆ ದಿವಾಕರ ಸರ್ ರವರು.
ಶಾಲೆಯಿಂದ ತಪ್ಪಿಸುವ ಮಕ್ಕಳು ಮುಂದೆ ನಿರಂತರ ಶಾಲೆಗೆ ಬರುವಂತೆ ಮಾಡುವ 'ನೀಲೂ - ಇನ್ನು ಶಾಲೆ ತಪ್ಪಿಸುವುದಿಲ್ಲ' ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ಮಕ್ಕಳ ಕಥೆಯಲ್ಲಿ ದಿಯಾರವರ ಕಥೆ ಚೆನ್ನಾಗಿ ಮೂಡಿಬಂದಿದೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸನ್ನಿವೇಶಗಳಲ್ಲಿ ಸಪ್ತಮಿರವರ ನೈತಿಕ ಶಿಕ್ಷಣದ ಅಗತ್ಯತೆಯ ಕುರಿತ ಲೇಖನ ತುಂಬಾ ಉತ್ತಮವಾಗಿತ್ತು. ದಿಯಾ ಹಾಗೂ ಸಪ್ತಮಿಯವರಿಗೆ ಅಭಿನಂದನೆಗಳು.
ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬರುತ್ತಿದೆ.
ಜಗಲಿಯ ಎಲ್ಲರಿಗೂ ಮನದಾಳದ ವಂದನೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಮನುಷ್ಯ ಸುಂದರನಾಗಿದ್ದರೆ ಸಾಲದು ಮನಸು ಕೂಡ ಅಷ್ಟೇ ಸುಂದರವಾಗಿದ್ದಾಗ ಜೀವನ ಸುಮಧುರ ಎನ್ನುವ ಸಂದೇಶವನ್ನು ಆಡಂಬರದ ಜೀವನ ಶೈಲಿಯ 'ಡಂಬಾಚಾರ' ಲೇಖನದ ಮೂಲಕ ಅದ್ಭುತವಾಗಿ ತಿಳಿಸಿದ್ದಾರೆ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು. ಧನ್ಯವಾದಗಳು ಸರ್...
'ನ ಹೀ ಜ್ಞಾನೇನ ಸದೃಶಂ ಪವಿತ್ರ ಮಿಹವಿದ್ಯತೇ' ಎನ್ನುವಂತೆ ಜ್ಞಾನಕ್ಕಿರುವ ಪವಿತ್ರತೆ, ಶಕ್ತಿ ಅದರಿಂದಾಗುವ ಲಾಭದ ಕುರಿತಾಗಿ ಸುಂದರ ಲೇಖನ ರಮೇಶ್ ಬಾಯಾರ್ ರವರಿಂದ.
ದ್ಯುತಿ ಸಂಶ್ಲೇಷಣಾ ಕ್ರಿಯೆಯ ಎರಡು ಪ್ರಮುಖ ಹಂತಗಳಾದ ಬೆಳಕು ಪ್ರತಿಕ್ರಿಯೆ ಹಾಗೂ ಇರುಳು ಪ್ರತಿಕ್ರಿಯೆಯನ್ನು ಬಹಳ ಅರ್ಥವತ್ತಾಗಿ ತಿಳಿಸಿದ್ದಾರೆ ದಿವಾಕರ ಸರ್ ರವರು. ಧನ್ಯವಾದಗಳು ಸರ್.
ಸ್ನೇಕ್ ಪ್ಲಾಂಟ್ ಹೆಸರೇ ತಿಳಿಸುವಂತೆ ಹಾವಿನಂತೆ ಕಾಣುವ ಸಸ್ಯದ ಕುರಿತಾದ ಸುಂದರ ವಿವರಣೆ ಸಸ್ಯದ ಭಾಷೆಯಲ್ಲಿದ್ದು ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ವಿಜಯಾ ಮೇಡಂ. ನಮ್ಮ ಮನೆಯಲ್ಲೂ ಈ ಗಿಡ ಇದೆ.
'ಬ್ಲೂ ಲಗೂನ್' ಎನ್ನುವ ಹೊಸ ದ್ವೀಪ ಪ್ರವಾಸಿ ತಾಣದ ಸುಂದರ ಪರಿಚಯ ನೀಡಿದ್ದೀರಿ. ಧನ್ಯವಾದಗಳು ರಮೇಶ್ ಉಪ್ಪುಂದ ಸರ್.
ಅಫಿಯಾಳ ರೋಗವನ್ನು ಗುಣಪಡಿಸುವ ಕುರಿತಾದ ಪುಸ್ತಕ 'ಅಫಿಯಾ' ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ವಾಣಿಯಕ್ಕ.
ಮಕ್ಕಳ ಕವನಗಳ ಸಂಚಿಕೆಯಲ್ಲಿ ರೀಧಾ, ಗುಣಶ್ರೀ ಹಾಗೂ ಭಾಗ್ಯ ಲಕ್ಮೀಯವರ ಕವನಗಳು ಸೊಗಸಾಗಿದೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
ರಮೇಶ್ ಉಪ್ಪಂದ ರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
ಕೊನೆಯದಾಗಿ ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಸುಂದರವಾದ ಕಥೆಯೊಂದರ ಮೂಲಕ ದೈವೀ ಗುಣದ ಕುರಿತು ಶಿಕ್ಷಣಾಧಿಕಾರಿಯವರಾದ ಶ್ರೀಜ್ಞಾನೇಶ್ ಸರ್ ರವರು ವಿವರಿಸಿದ ರೀತಿ ಅದ್ಭುತವಾಗಿತ್ತು. ಉತ್ತಮ ಲೇಖನ. ಧನ್ಯವಾದಗಳು ಸರ್.
ಆಸೆ ಅತಿ ಆಸೆಯಾಗದೆ ಮಿತಿಯಲ್ಲಿರಬೇಕೆನ್ನುವ ಸಂದೇಶ ವನ್ನು ನೀಡಿದ ಉತ್ತಮ ಲೇಖನ ರಮೇಶ್ ಬಾಯಾರ್ ರವರಿಂದ. ಧನ್ಯವಾದಗಳು ಸರ್.
ಬಿಳಿ ಬೆರ್ರಿ ಬುಶ್ ಎನ್ನುವ ಸಸ್ಯದ ಅದ್ಭುತ ಔಷಧೀಯ ಗುಣದ ಮಾಹಿತಿಯೊಂದಿಗೆ ಈ ಗಿಡದ ಸಂಪೂರ್ಣ ಪರಿಚಯ ನೀಡಿದ ವಿಜಯಾ ಮೇಡಂರವರಿಗೆ ಧನ್ಯವಾದಗಳು.
ಮಾವಿನ ಕುರ್ವೆ ದ್ವೀಪದ ಕುರಿತಾದ ವಿವರವಾದ ಮಾಹಿತಿ ಈ ವಾರದ ಪಯಣ ಸಂಚಿಕೆಯಲ್ಲಿ ರಮೇಶ್ ಉಪ್ಪುಂದರವರಿಂದ ಸೊಗಸಾಗಿತ್ತು.
ವಾಣಿಯಕ್ಕನ ವರಿಂದ ನೆಸೋ ಮತ್ತು ನಾಜೆ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
ರಜೆಯ ಓದು ಎನ್ನುವ ಹೊಸ ಸಂಚಿಕೆಯಲ್ಲಿ ಅಶ್ವಿನ್ ರಾವ್ ರವರು ಜಾತಕ ಕಥೆಗಳ ಕುರಿತಾಗಿ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಜಗಲಿಯ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಆಸಕ್ತ ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಎಲ್ಲರೂ ಸೇರಿದಾಗ ಒಂದು ಶಾಲೆಯನ್ನು ಯಾವ ರೀತಿ ಮಾದರಿ ಶಾಲೆಯನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಕೊಕ್ರಾಡಿ ಶಾಲೆಯ ಉದಾಹರಣೆಯೊಂದಿಗೆ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ತಮ್ಮ ಸಂಚಿಕೆಯಲ್ಲಿ ತಿಳಿಸಿದ್ದಾರೆ.
ನಾವು ಉತ್ತಮರಾಗಲು ಇರಬೇಕಾದ ಅರ್ಹತೆಗಳನ್ನು ಬಹಳ ಸುಂದರವಾಗಿ ಶ್ಲೋಕವೊಂದರ ಮೂಲಕ ವಿಶ್ಲೇಷಿದ್ದಾರೆ ರಮೇಶ ಸರ್ ರವರು.
ದ್ಯುತಿಸಂಶ್ಲೇಷಣಾ ಕ್ರಿಯೆಯಲ್ಲಿ ಹಸಿರು ವರ್ಣಕದ ಕಾರ್ಯವನ್ನು ವಿವರವಾಗಿ ದಿವಾಕರ ಸರ್ ರವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ ತಿಳಿಸಿದ್ದಾರೆ.
ಅಲ್ಲಲ್ಲಿ ಅಪರೂಪಕ್ಕೆ ಕಂಡು ಬರುವ ನಾಗಾರ್ಜುನಿ ಅಥವಾ ಹಾಲು ಗಿಡದ ಕುರಿತಾದ ಸವಿಸ್ತಾರವಾದ ಮಾಹಿತಿ ಈ ಸಲದ ಸಂಚಿಕೆಯಲ್ಲಿ ವಿಜಯ ಮೇಡಂ ರವರಿಂದ ಚೆನ್ನಾಗಿ ಮೂಡಿ ಬಂದಿದೆ.
ಚಾರಣಕ್ಕೆ ಪ್ರಶಸ್ತವಾದ ಉಡುಪಿ ಜಿಲ್ಲೆಯ ವಾಲಿಕುಂಜದ ಪರಿಚಯ ರಮೇಶರವರ ಪಯಣ ಸಂಚಿಕೆಯಲ್ಲಿ ಉತ್ತಮವಾಗಿತ್ತು.
ವಾಣಿಯಕ್ಕನವರಿಂದ ಊಲಾ ಚುನಾವಣೆಯ ಸಮಯ ಎನ್ನುವ ಸುಂದರ ಪುಸ್ತಕದ ಪರಿಚಯ ಸೊಗಸಾಗಿತ್ತು.
ಪರೋಪಕಾರದಿಂದಾಗುವ ಸಂತೋಷ ಹಾಗೂ ನೆಮ್ಮದಿಯ ಕುರಿತಾದ ಸ್ವ ಅನುಭವದ ಕತೆಯಿಂದ ಮಕ್ಕಳಲ್ಲಾದ ಬದಲಾವಣೆಯ ಬಗ್ಗೆ ತಮ್ಮ ಅನುಭವವನ್ನು ಬಹಳ ಸುಂದರವಾಗಿ ಸುಪ್ರಿಯಾ ಮೇಡಂರವರು ಶಿಕ್ಷಕರ ಡೈರಿ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ.
ರಮೇಶ್ ನಾಯ್ಕರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
ಅಭಿನವ್ ರವರಿಂದ ಸೈಕಲಿನಲ್ಲಿ ಶಿಬಿರಕ್ಕೆ ಹೋದುದು ಮತ್ತು ಅಲ್ಲಿನ ಚಟುವಟಿಕೆಗಳ ಕುರಿತಾದ ಸವಿಸ್ತಾರವಾದ ಅನುಭವ ತುಂಬಾ ಉತ್ತಮವಾಗಿತ್ತು. ಅಭಿನಂದನೆಗಳು ಅಭಿನವ್ ಗೆ.
ಅಶ್ವಿನ್ ರಾವ್ ರವರ ರಜೆಯ ಓದು ಸಂಚಿಕೆ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಸಹಕಾರಿ. ಈ ವಾರ ಪಂಚತಂತ್ರ ಕಥೆಗಳನ್ನು ಓದುವಂತೆ ಪ್ರೇರೆಪಿಸಿದ್ದಾರೆ.
ಜಗಲಿಯ ಎಲ್ಲರಿಗೂ ಮನದಾಳದ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಎಲ್ಲರಿಗೂ ನಮಸ್ಕಾರಗಳು,
ವೃದ್ಧ ತಂದೆ ತಾಯಂದಿರನ್ನು ಹೇಗೆ ನಡೆಸಿಕೊಳ್ಳಬೇಕೆನ್ನುವ ಸಿದ್ದೇಶ್ವರ ಸ್ವಾಮೀಜಿಯವರ ಸುಂದರ ಕಥೆಯೊಂದಿಗೆ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರ ಈ ಸಲದ ಲೇಖನ ಪ್ರಸ್ತುತ ಕಾಲಘಟಕ್ಕೆ ಅಗತ್ಯ ಹಾಗೂ ಪೂರಕ. ಧನ್ಯವಾದಗಳು ಸರ್.
ಸುಂದರ ಕಥೆಯೊಂದರ ಮೂಲಕ ಜ್ಞಾನವನ್ನು ಪಡೆಯುವ ಬಗೆಯನ್ನು ಸರಳವಾಗಿ ಸೊಗಸಾಗಿ ರಮೇಶ್ ಬಾಯಾರ್ ರವರು ತಮ್ಮ ಸಂಚಿಕೆಯಲ್ಲಿ ತಿಳಿಸಿದ್ದಾರೆ.
ಬೆಳಕಿನ ಚದುರುವಿಕೆಯ ಮೂಲಕ ಆಕಾಶ ಹಾಗೂ ಸಮುದ್ರದ ಬಣ್ಣ ನೀಲಿಯಾಗಿ ಕಾಣಲು ಕಾರಣವನ್ನು ಎಂಬುದನ್ನು ಸೊಗಸಾಗಿ ವಿವರಿಸಿದ್ದಾರೆ ದಿವಾಕರ್ ಸರ್ ರವರು. ನಮ್ಮ ಭೌತ ವಿಜ್ಞಾನಿ ಶ್ರೀ ಸಿ ವಿ ರಾಮನ್ ರವರುಕೂಡ ಇದೇ ವಿಷಯವನ್ನು ಅಧ್ಯಯನ ನಡೆಸಿದ್ದಾರೆ. ಇವರ ಕುರಿತಾಗಿ ಮುಂದಿನ ಸಂಚಿಕೆಯಲ್ಲಿ ತಿಳಿಸಬಹುದು ಎಂದು ಆಶಿಸುವೆ.
ಸಸ್ಯಗಳೇ ಮಾತನಾಡುವ ಶೈಲಿಯಲ್ಲಿ ಈಶ್ವರ ಬಳ್ಳಿಯ ಸೊಗಸಾದ ಪರಿಚಯವನ್ನು ವಿಜಯ ಮೇಡಂರವರು ತಮ್ಮ ಸಂಚಿಕೆಯಲ್ಲ ನೀಡಿದ್ದಾರೆ. ಧನ್ಯವಾದಗಳು ಮೇಡಂ.
ರಮೇಶ ಉಪ್ಪುಂದರವರ ಪಯಣ ಸಂಚಿಕೆ ನಿಜವಾಗಿಯೂ ಪ್ರವಾಸಿ ತಾಣಗಳ ಅತ್ಯುತ್ತಮ ಮಾಹಿತಿಯನ್ನು ಒದಗಿಸುತ್ತಿದೆ. ಈ ವಾರದ ಸಂಚಿಕೆಯಲ್ಲಿ ಹನುಮಕೊಂಡದ ಸಾವಿರ ಕಂಬದ ದೇವಾಲಯದ ಸುಂದರ ಪರಿಚಯವನ್ನು ನೀಡಿದ್ದಾರೆ. ಧನ್ಯವಾದಗಳು ಸರ್.
ಪುಸ್ತಕ ಓದುವ ಹವ್ಯಾಸವನ್ನು ಹೊಂದಿರುವ ಹುಡುಗಿ ಪುಚ್ಕುವಿನ ಕುರಿತಾಗಿರುವ ಸುಂದರ ಪುಸ್ತಕ ಪುಚ್ಕು ವಿಗೊಂದು ಬುಕ್ಕು ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ವಾಣಿ ಅಕ್ಕ.
ಶಿಕ್ಷಕರ ಮಾತನ್ನು ಅಕ್ಷರಶಃ ಪಾಲಿಸುವ ಮಗುವಿನ ಕುರಿತಾದ ಅನುಭವದ ಮಾತುಗಳು ರಮ್ಯ ಮೇಡಂ ರವರಿಂದ ಬಹಳ ಸೊಗಸಾಗಿ ಮೂಡಿ ಬಂದಿವೆ.
ಶಿಕ್ಷಕರಾದ ಅಶ್ವಿನ್ ರಾವ್ ರವರ ರಜೆಯ ಓದು ಸಂಚಿಕೆಯಲ್ಲಿ ಈಸೋಪನ ಕಥೆಗಳು ಹಾಗೂ ಸಾಹಸ ಕಥೆಗಳ ಕುರಿತಾದ ಮಾಹಿತಿ ಚೆನ್ನಾಗಿತ್ತು.
ಕ್ಲಿಷ್ಟಕರವಾದ ಪದದಂಗಳ ಸಂಚಿಕೆಯನ್ನು ಮುನ್ನಡೆಸುತ್ತಿರುವ ರಮೇಶ್ ಉಪ್ಪುಂದರವರಿಗೆ ಧನ್ಯವಾದಗಳು.
ಎಲ್ಲರಿಗೂ ಮನದಾಳದ ವಂದನೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************