-->
ಪಯಣ : ಸಂಚಿಕೆ - 46 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 46 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 46 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ಸಾವಿರ ಕಂಬಗಳ ದೇವಾಯಲಯ, ಹನುಮಕೊಂಡ ಗೆ ಪಯಣ ಮಾಡೋಣ ಬನ್ನಿ....

       ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡ ಎಂಬಲ್ಲಿದೆ ಈ ಸುಂದರ ಕೆತ್ತನೆಯ ಐತಿಹಾಸಿಕ ದೇವಾಲಯ. ರುದ್ರೇಶ್ವರಸ್ವಾಮಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು - ಶಿವ, ವಿಷ್ಣು ಹಾಗೂ ಸೂರ್ಯರ ವಿಗ್ರಹಗಳನ್ನೊಳಗೊಂಡಿವೆ.

ವಿಶೇಷವೆಂದರೆ ಇಲ್ಲಿ ಸಾವಿರ ಕಂಬಗಳಿದ್ದು ಅವುಗಳನ್ನು ಯಾವ ರೀತಿ ವಿನ್ಯಾಸ ಮಾಡಲಾಗಿದೆ ಎಂದರೆ ಯಾವುದೆ ನಿರ್ದಿಷ್ಟ ಸ್ಥಳದಿಂದ ಯಾರಾದರಾಗಲಿ ದೇವರ ದರ್ಶನವನ್ನು ಕಂಬದ ಯಾವ ಅಡೆ ತಡೆಗಳಿಲ್ಲದೆ ಸುಸೂತ್ರವಾಗಿ ಪಡೆಯಬಹುದು. 

ಕಾಕತೀಯರ ಸಮಯದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದೆ. ಕಾಕತೀಯ ಅರಸ ರುದ್ರ ದೇವ ಕ್ರಿ.ಶ. 1163 ರಲ್ಲಿ ಈ ಕಟ್ಟಡವನ್ನು ಕಟ್ಟಿದನು. ಇಲ್ಲಿರುವ ಬಹಳ ಸುಂದರವಾಗಿ ಕೆತ್ತಿದ ಸಾವಿರ ಕಂಬಗಳು ಇರುವ ಕಾರಣ ಈ ದೇವಾಲಯ ತನ್ನ ಹೆಸರನ್ನು ಪಡೆದುಕೊಂಡಿತು. 

ಆಕರ್ಷಕ ದ್ವಾರಗಳು, ಈ ಮೊದಲೇ ಉಲ್ಲೇಖಿಸಿದ ಕಂಬಗಳು ಮತ್ತು ಛಾವಣಿ ಹಾಗೂ ಶಿಲಾಶಾಸನಗಳು ಈ ದೇವಾಲಯವನ್ನು ವಾರಂಗಲ್ ನ ಪ್ರಮುಖ ಮತ್ತು ಆಕರ್ಷಕ ತಾಣವನ್ನಾಗಿಸಿದೆ. 

ದೇವಾಲಯದ ಹಿಂದಿರುವ ಹನುಮಕೊಂಡ ಬೆಟ್ಟಗಳು ದೇವಾಲಯದ ಸೊಬಗನ್ನು ದ್ವಿಗುಣಗೊಳಿಸಿದೆ. ಇದರ ದ್ವಾರದ ಬಳಿ ಇರುವ ಬೃಹತ್‌ ಗಾತ್ರದ ನಂದಿಯ ಮೂರ್ತಿಯನ್ನು ಚೆನ್ನಾಗಿ ಮೆರುಗು ಗೊಳಿಸಿದ ಕಪ್ಪು ಅಮೃತಶಿಲೆಯಿಂದ ಒಂದೆ ಕಲ್ಲಿನಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ. ಸಾವಿರ ಕಂಬದ ದೇವಾಲಯವನ್ನು ಅತೀ ದೊಡ್ಡ ದೇವಾಲಯ ಮತ್ತು ಕಾಕತೀಯ ವಾಸ್ತುಶಿಲ್ಪದ ಅತ್ಯುನ್ನತ ಉದಾಹರಣೆಯಾಗಿದೆ ಎಂದು ನಂಬಲಾಗಿದೆ. ಇದು ದಕ್ಷಿಣ ಭಾರತದ ಅತೀ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.

"ಶಿವ, ವಿಷ್ಣು ಮತ್ತು ಸೂರ್ಯರ ದಿವ್ಯ ಸನ್ನಿಧಿ, ಸಾವಿರ ಕಂಬಗಳ ಅಮೋಘ ಆಕರ್ಷಕ ಶಿಲ್ಪ ಕಲೆಗಳ ದೈವಿ ಸ್ಥಾನ" ಈ ಸಾವಿರ ಕಂಬಗಳ ದೇವಾಯಲಯ, ಹನುಮಕೊಂಡ.... ಬನ್ನಿ ಒಮ್ಮೆ ಪ್ರವಾಸಕ್ಕೆ..   
        ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article