ಮಕ್ಕಳ ಕವನಗಳು : ಸಂಚಿಕೆ - 46 - ಕವನ ರಚನೆ : ಆದ್ಯಂತ್ ಅಡೂರು, ದ್ವಿತೀಯ ಪಿಯುಸಿ, ವಿಜ್ಞಾನ ವಿಭಾಗ
Friday, June 13, 2025
Edit
ಮಕ್ಕಳ ಕವನಗಳು : ಸಂಚಿಕೆ - 46
ಕವನ ರಚನೆ : ಆದ್ಯಂತ್ ಅಡೂರು
ದ್ವಿತೀಯ ವಿಜ್ಞಾನ ವಿಭಾಗ
ಅಂಬಿಕಾ ಪದವಿಪೂರ್ವ
ವಿದ್ಯಾಲಯ ಬಪ್ಪಳಿಗೆ
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
ನಡೆಯಿತು ಆ ದಿನ ಭೀಕರ ದಾಳಿ
ಧರ್ಮವ ಕೇಳಿ ಗುಂಡಿನ ಮಳೆಯು
ಯಾತ್ರಿಕರಾದರು ಇದಕ್ಕೆ ಬಲಿಯು || ೧||
ಉಗ್ರವಾದವನು ಮುಗಿಸಲೇ ಬೇಕು
ಭಾರತ ಸೇಡನು ತೀರಿಸಬೇಕು
ಸಿಂಧೂ ನದಿಯೇ ಉಗ್ರರ ಜೀವವು
ತಡೆಯಿತು ನದಿಯನು ಭಾರತವು ||೨||
ಶಾಂತಿಯ ಉಳಿಸಲು ಯುದ್ಧವು ನಡೆಯಲಿ
ಉಗ್ರರ ಬೆಳೆಸುವ ರಾಷ್ಟ್ರವು ಸಾಯಲಿ
ವಿಜಯ ಪತಾಕೆಯ ಭಾರತ ಎತ್ತಲಿ
ಹುತಾತ್ಮ ಜನರಿಗೆ ಇದು ಶ್ರದ್ಧಾಂಜಲಿ ||೩||
ಏಳಲೇಬೇಕು ಹೃದಯದಿ ಕಿಚ್ಚು
ಹಿಂದುಗಳೆಲ್ಲರು ಕಾಯುವುದೆಷ್ಟು ?
ಉಗ್ರರ ನಡೆಯನು ಖಂಡಿಸುವ
ಭಾರತ ಮಾತೆಯ ರಕ್ಷಿಸುವ ||೪||
................................. ಆದ್ಯಂತ್ ಅಡೂರು
ದ್ವಿತೀಯ ವಿಜ್ಞಾನ ವಿಭಾಗ
ಅಂಬಿಕಾ ಪದವಿಪೂರ್ವ
ವಿದ್ಯಾಲಯ ಬಪ್ಪಳಿಗೆ
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
****************************************
ನೋಡಲು ಇದು ಬಹಳ ಸುಂದರ
ಪ್ರಾಣಿ, ಪಕ್ಷಿಗಳ ವಾಸಸ್ಥಾನವು
ಗಿಡ. ಮರಗಳು ತುಂಬಿದ ವನವು ||೧||
ಶುದ್ಧ ನೀರಿನ, ಗಾಳಿಯ ಪ್ರಕೃತಿಯು
ಜುಳುಜುಳು ಹರಿಯುವ ಸುಂದರ ನದಿಯು
ನೋಡಲು ಸಾಲದು ಎರಡು ಕಣ್ಣು
ಜೀವಜಾಲಗಳ ಆರೋಗ್ಯದ ಮಣ್ಣು. ||೨||
ಕೇಳುತಲಿಹುದು ಹಕ್ಕಿಗಳ ಧ್ವನಿಯು
ಚುಮುಚುಮು ತಂಪಿನ ಮಂಜಿನ ಹನಿಯು
ಗದ್ದೆಯ ತುಂಬಾ ಭತ್ತದ ಕೃಷಿಯು
ಹಸಿರಿನ ಪೈರನು ನೋಡಲು ಖುಷಿಯು ||೩||
................................. ಆದ್ಯಂತ್ ಅಡೂರು
ದ್ವಿತೀಯ ವಿಜ್ಞಾನ ವಿಭಾಗ
ಅಂಬಿಕಾ ಪದವಿಪೂರ್ವ
ವಿದ್ಯಾಲಯ ಬಪ್ಪಳಿಗೆ
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
****************************************
ಕಲಾರಂಗಗಳ ನೆಲೆವೀಡು
ಗೋವಿಂದ ಪೈಗಳು, ಕಯ್ಯಾರರು
ಹಲವು ಸಾಹಿತಿಗಳ ತವರೂರು ||೧||
ಬೇಕಲಕೋಟೆಯು ನೋಡಲು ಚಂದವು
ಮನಸನು ಸೆಳೆಯುವ ರಾಣಿಪುರವು
ನೀಲೇಶ್ವರದ ದೋಣಿಯ ಮನೆಯು
ಚಂದ್ರಗಿರಿಯೆಂಬ ಹರಿಯುವ ಗಂಗೆಯು ||೨||
ಕುಂಬಳೆ ಸೀಮೆಯ ದೇಗುಲ ಅಡೂರು
ಕಣಿಪುರ, ಮುಜಂಗಾವು, ಮಧೂರು
ನೋಡಲು ಸುಂದರ ಪ್ರಕೃತಿಯ ಹಸಿರು
ಕನ್ನಡ ಭಾಷೆಯ ಆಡುವ ಜನರು ||೩||
ಕಾಸರಗೋಡಿನ ಕನ್ನಡಿಗರು ನಾವು
ಕನ್ನಡ ಭಾಷೆಯ ಉಳಿಸುವೆವು
ಕನ್ನಡ ಭುವನೇಶ್ವರಿಯನು ನೆನೆಯುತ,
ಆಕೆಗೆ ಕನ್ನಡದಾರತಿ ಬೆಳಗುವೆವು ||೪||
................................. ಆದ್ಯಂತ್ ಅಡೂರು
ದ್ವಿತೀಯ ವಿಜ್ಞಾನ ವಿಭಾಗ
ಅಂಬಿಕಾ ಪದವಿಪೂರ್ವ
ವಿದ್ಯಾಲಯ ಬಪ್ಪಳಿಗೆ
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
****************************************
ಹರಿಯುವಂತ ಭಾರತ
ಕಾಶಿ. ಮಥುರ, ವಾರಣಾಸಿ
ದೇಗುಲಗಳ ಭಾರತ ||೧||
ನವದೆಹಲಿಯೇ ರಾಜಧಾನಿ
ಹಿಂದಿ ರಾಷ್ಟ್ರ ಭಾಷೆಯು
ಎಲ್ಲರೊಂದೆ ನಾವು ಎನುವ
ನಮ್ಮ ರಾಷ್ಟ್ರ ಗೀತೆಯು ||೨||
ಗಾಂಧೀಜಿ, ಭೋಸರೆಲ್ಲ ಸೇರಿ
ಸ್ವಾತಂತ್ರ್ಯವ ಕೊಟ್ಟರು
ಹೋರಾಟದ ಕಾವಿನಲ್ಲಿ
ಬ್ರಿಟೀಷರು ದೇಶ ಬಿಟ್ಟರು ||೩||
ಹಲವು ಧರ್ಮ ಒಂದೆ ಎನ್ನುವ
ನಾವು ಭಾರತೀಯರು
ರಾಜ್ಯ ಬೇರೆಯಾದರೂ
ನಾವು ಭಾರತೀಯರು ||೪||
ನಮ್ಮ ಭಾಷೆ, ನಮ್ಮ ನೀತಿ
ವಿಶ್ವ ಶ್ರೇಷ್ಠವಾಗಿದೆ
ಶಿರದಲಿರುವ ಕಾಶ್ಮೀರವು
ತಲೆಯೆತ್ತಿ ನಿಂತಿದೆ ||೫||
ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ)
ಅಂಬಿಕಾ ಪದವಿಪೂರ್ವ
ವಿದ್ಯಾಲಯ ಬಪ್ಪಳಿಗೆ
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
****************************************