ಮಕ್ಕಳಿಗೆ ರಜೆಯ ಓದು : ಸಂಚಿಕೆ - 02
Sunday, June 1, 2025
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 02
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ನಾವೆಲ್ಲಾ ಬಾಲ್ಯದಲ್ಲಿ ಇಷ್ಟಪಟ್ಟು ಓದಿದ ಪುಸ್ತಕಗಳಲ್ಲಿ ಪಂಚತಂತ್ರ ಕಥೆಗಳೂ ಒಂದು. ಈ ಕಥೆಗಳನ್ನು ಬರೆದವರು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿಯದೇ ಇದ್ದರೂ ಬಹಳಷ್ಟು ಮಂದಿ ವಿಷ್ಣು ಶರ್ಮ ಎನ್ನುವ ವ್ಯಕ್ತಿ ಬರೆದಿದ್ದಾರೆ ಎಂದು ನಂಬಿದ್ದಾರೆ. ನಾವು ಬಾಲ್ಯದಲ್ಲಿ ಓದಿದ ಮೊಲದ ಚತುರತೆಯ ಕಥೆ ಇನ್ನೂ ನಮಗೆ ನೆನಪಿದೆ ಎಂದರೆ ಪಂಚತಂತ್ರದ ಕಥೆಗಳ ಮಹತ್ವ ಹೇಳುತ್ತದೆ. “ಬುದ್ಧಿವಂತ ಮೊಲ ಶಕ್ತಿಶಾಲಿ ಸಿಂಹವನ್ನು ತನ್ನ ಬುದ್ಧಿಶಕ್ತಿಯ ಸಹಾಯದಿಂದ ಬಾವಿಯೊಳಗೆ ಬೀಳಿಸಿ ಕಾಡಿನ ಇತರೆ ಪ್ರಾಣಿಗಳನ್ನು ರಕ್ಷಿಸಿದ ಕಥೆ ನೆನಪಿದೆಯೇ?”
ಪಂಚತಂತ್ರ ಕಥೆಗಳು ಬಹಳಷ್ಟು ಭಾಷೆಗಳಿಗೆ ಅನುವಾದಗೊಂಡಿವೆ. ಕೇವಲ ಭಾರತೀಯ ಭಾಷೆ ಅಷ್ಟೇ ಅಲ್ಲ, ವಿದೇಶಿ ಭಾಷೆಗಳಿಗೂ ಅನುವಾದಗೊಂಡಿರುವುದು ಪಂಚತಂತ್ರ ಕಥೆಗಳ ಹಿರಿಮೆ. ವಿಶ್ವದಾದ್ಯಂತ ಸುಮಾರು ಐವತ್ತು ಭಾಷೆಗಳಿಗೆ ಅನುವಾದವಾಗಿರಬಹುದು ಎಂಬುದು ಒಂದು ಅಂದಾಜು. ಕ್ರಿ. ಶ. ೩೦೦ ರಲ್ಲಿ ಈ ಕಥೆಗಳು ಬರೆಯಲ್ಪಟ್ಟಿವೆ ಅಥವಾ ಹೇಳಲ್ಪಟ್ಟಿವೆ ಎಂದು ನಂಬಲಾಗಿದೆ. ಈ ಕಥೆಗಳನ್ನು ಗದ್ಯ ಹಾಗೂ ಪದ್ಯ ಎರಡೂ ರೂಪದಲ್ಲಿ ರಚಿಸಲಾಗಿದೆ. ಕ್ರಿ.ಶ. ೫೫೦ರ ಸಮಯದಲ್ಲಿ ಈ ಕಥೆಗಳು ಪರ್ಶಿಯನ್ ಭಾಷೆಗೆ ಅನುವಾದಗೊಂಡವು. ನಂತರ ಅರೇಬಿಕ್, ಯುರೋಪಿಯನ್ ಭಾಷೆಗಳಾದ ಸ್ಪಾನಿಶ್, ಲಾಟಿನ್ ಮತ್ತು ಇಂಗ್ಲಿಷ್ ಭಾಷೆಗಳಿಗೆ ಭಾಷಾಂತರಗೊಂಡವು. ಅರೇಬಿಕ್ ಭಾಷೆಯಲ್ಲಿ ‘ಕಲ್ಲಿಲ್ಲಾಹ್ವಾ ದಿಮ್ನಾಹ್ (Kalilah Wa - Dimnah) ಎಂಬ ಹೆಸರಿನಲ್ಲಿ ಪ್ರಕಟವಾದವು. ಈ ಅನುವಾದಿತ ಕೃತಿಗಳು ಪಂಚತಂತ್ರದ ಸಾರವನ್ನು ಜಗತ್ತಿನಾದ್ಯಂತ ಹರಡಲು ನೆರವಾದವು. ಕಾಡಿನ ವನ್ಯ ಮೃಗಗಳ ಕೃತಿಗಳು ಮಕ್ಕಳನ್ನು ಬಹಳಷ್ಟು ಸೆಳೆಯುತ್ತವೆ ಎನ್ನುವುದಕ್ಕೆಪಂಚತಂತ್ರ ಕಥೆಗಳೇ ಸಾಕ್ಷಿ. ಕನ್ನಡ ಭಾಷೆಯಲ್ಲೂ ಹಲವಾರು ಪಂಚತಂತ್ರದ ಕಥಾ ಪುಸ್ತಕಗಳು ಹೊರಬಂದಿವೆ.
ಚಿತ್ರ ಕೃಪೆ: ಅಂತರ್ಜಾಲ ತಾಣ (ವಿವಿಧ ಪ್ರಕಾಶಕರಿಂದ ಪ್ರಕಟವಾದ ಪಂಚತಂತ್ರ ಕಥೆಗಳು)
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************