-->
ಪ್ರೀತಿಯ ಪುಸ್ತಕ : ಸಂಚಿಕೆ - 153

ಪ್ರೀತಿಯ ಪುಸ್ತಕ : ಸಂಚಿಕೆ - 153

ಪ್ರೀತಿಯ ಪುಸ್ತಕ
ಸಂಚಿಕೆ - 153
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
           
                             ನವಿಲಿನ ಜಂಭ
ಪ್ರೀತಿಯ ಮಕ್ಕಳೇ.... ಜಂಭ ಪಡುವ ಪ್ರಾಣಿಗಳ, ಮನುಷ್ಯರ ಕತೆಗಳನ್ನು ನೀವು ಸಾಕಷ್ಟು ಕೇಳಿರಬಹುದು. ಅಂತಹುದೇ ಒಂದು ನವಿಲಿನ ಕಥೆ ಇದು. ನವಿಲು ಬಹಳ ಚಂದ ತಾನೇ? ಎಲ್ಲರಿಗೂ ನವಿಲನ್ನು ನೋಡುವುದಕ್ಕೆ ಬಹಳ ಇಷ್ಟ ತಾನೇ? ಪಕ್ಷಿಗಳಲ್ಲೆಲ್ಲಾ ತಾನೇ ಚಂದ ಅಂತ ನವಿಲಿಗೆ ಜಂಭ ತಲೆಗೆ ಏರಿತು. ಎಲ್ಲರನ್ನೂ ಕೀಳಾಗಿ ಕಾಣಲಾರಂಭಿಸಿತು. ಕೆಂಬೂತವೊಂದಕ್ಕೆ ಈ ನವಿಲಿನ ಚಂದ ನೋಡಲು ಬಲು ಇಷ್ಟ. ಹಾಗೆ ನೋಡುತ್ತಿರುವುದು ನವಿಲಿಗೂ ಗೊತ್ತಾಯಿತು. ನವಿಲು ಹೆಮ್ಮೆಯಿಂದ ಬೀಗಿತು. ಕೆಂಬೂತವನ್ನು ತನ್ನ ಅಡಿಯಾಳಿನಂತೆ ಕೀಳಾಗಿ ಕಾಣತೊಡಗಿತು. ಪಾಪ ಕೆಂಬೂತಕ್ಕೆ ಸಾಕು ಸಾಕಾಯಿತು. ಕಾಡಿನ ಇತರ ಪ್ರಾಣಿ ಪಕ್ಷಿಗಳನ್ನೂ ಎದುರು ಹಾಕಿಕೊಂಡಿತ್ತು. ಜಂಭ ತಲೆಗೆ ಏರಿದ ಮೇಲೆ ಇಳಿಯಲೇ ಬೇಕಲ್ಲವೇ? ಈ ನವಿಲಿನ ಜಂಭ ಹೇಗೆ ಇಳಿಯಿತು ಅಂತ ತಿಳಿಯಬೇಕಾದರೆ ಪುಸ್ತಕ ಓದಿ.. ಸ್ವಾಭಿಮಾನಕ್ಕೂ ಜಂಭಕ್ಕೂ ಇರುವ ವ್ಯತ್ಯಾಸದ ಬಗ್ಗೆ ಯೋಚನೆ ಮಾಡಿ.
ಲೇಖಕರು: ಬಿ.ಕೆ. ಮೀನಾಕ್ಷಿ 
ಚಿತ್ರಗಳು: ರಘುಪತಿ ಶೃಂಗೇರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು
ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article