ಪ್ರೀತಿಯ ಪುಸ್ತಕ : ಸಂಚಿಕೆ - 151
Saturday, February 22, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 151
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಇಲ್ಲೊಬ್ಬ ಸೋಮೇಶ. ಅವನು ಮಹಾ ಸೋಮಾರಿ. ಸೋಮಾರಿತನ ಎಲ್ಲರಿಗೂ ಆಗೊಮ್ಮೆ ಈಗೊಮ್ಮೆ ಬರುತ್ತಾ ಇರುತ್ತದಲ್ಲವೇ? ಹೆಚ್ಚಾಗಿ ಮನೆಕೆಲಸ ಮಾಡುವಾಗ ಇಷ್ಟು ದೊಡ್ಡ ಆಕಳಿಕೆ ಬಂದು ಯಾರಾದರೂ ದೊಡ್ಡವರು ಇದನ್ನು ಬರೆದು ಹಾಕಲಿ ಅಂತ ಮಕ್ಕಳಿಗೆ ಅನಿಸುವುದೂ ಉಂಟು. ಹಾಗೆಯೇ ಸೋಮೇಶನಿಗೆ, ಯಾವುದೇ ಕೆಲಸ ಮಾಡಲು ಬೇಜಾರು. ಕೆಲಸ ಮಾಡಲು ಒಬ್ಬ ಸೇವಕ ಸಿಗಲಿ ಎಂಬ ಆಸೆ. ಅಲ್ಲಾವುದ್ದೀನನಿಗೆ ಜೀನಿ ಸಿಕ್ಕ ಹಾಗೆ ತನಗೊಬ್ಬ ಸಿಕ್ಕರೆ ಆರಾಮವಾಗಿ ಇರಬಹುದಲ್ಲಾ ಅಂತ ಲೆಕ್ಕಾಚಾರ. ಹೀಗಿರಬೇಕಾದರೆ ಶಾಲೆಗೆ ವಾರದ ರಜಾ ಸಿಕ್ಕಿ ಅಜ್ಜಿ ಮನೆಗೆ ಹೋಗುತ್ತಾನೆ. ಆಟದ ಮೈದಾನದಲ್ಲಿ ಅವನಿಗೆ ಪುಟ್ಟ ಕೈ, ಕಾಲು, ಪಿಳಿ ಪಿಳಿ ಕಣ್ಣುಗಳಿರುವ ಒಂದು ಚೆಂಡು ಕಾಣಿಸುತ್ತದೆ. ಆ ಚೆಂಡಿನ ಹೆಸರು ‘ತಂ ತಂ ತಥಾಸ್ತು’. ಹೆಸರು ಹೇಳುವ ಹಾಗೆ ಈ ಚೆಂಡು ತಥಾಸ್ತು ಅಂದರೆ ಬೇಕಾದ್ದು ನಡೆಯುತ್ತದೆ. ಸೋಮೇಶನ ಕನಸು ನನಸಾಗುತ್ತದೆ. ಈ ಚೆಂಡು ಹತ್ರ ಅವನು ಏನೇನು ಕೇಳಿದ, ಅದು ಅವನಿಗಾಗಿ ಏನೇನು ಮಾಡಿತು. ಸೋಮೇಶ ಕೊನೆಯಲ್ಲಿ ಏನು ಪಾಠ ಕಲಿತ ಅಂತ ತಿಳಿಯಲು ಪುಸ್ತಕ ಓದಿ.
ಲೇಖಕರು: ಎಂ.ಮನೋಹರ ಪೈ
ಚಿತ್ರಗಳು: ಎಂ.ಮೋಹನ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು
ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************