ಜಗಲಿ ಕಟ್ಟೆ : ಸಂಚಿಕೆ - 40
Monday, February 26, 2024
Edit
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಒಂದೂರಲ್ಲಿ ಯುವಕರೆಲ್ಲ ಒಟ್ಟು ಸೇರಿ ನಿಸ್ವಾರ್ಥವಾಗಿ ಸೇವೆ ಮಾಡುವ ಧ್ಯೇಯವನ್ನು ಕಟ್ಟಿಕೊಂಡರು. ಇವರು ಸಮಾಜದ ಅಶಕ್ತ, ದುರ್ಬಲ, ಅನಾರೋಗ್ಯ ಪೀಡಿತ ವ್ಯಕ್ತಿ , ಕುಟುಂಬಗಳಿಗೆ ಸಹಾಯ ಮಾಡುವ ದೊಡ್ಡ ಕೆಲಸವನ್ನು ಮಾಡಲು ಶುರು ಮಾಡಿದರು. ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ, ದೇಣಿಗೆಗಳನ್ನು ಸಂಗ್ರಹಿಸಿ ಫಲಾನುಭವಿಗಳಿಗೆ ಹಂಚುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಂಸ್ಥೆ ಅವರದಾಗಿತ್ತು. ಇತ್ತೀಚೆಗೆ ನಡೆದ ಅವರ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಸಂಘಟಕಕರು ಮಾತಾಡುತ್ತಾ, "ನಮ್ಮ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಧ್ಯಮಗಳ ಮೂಲಕ ರಾಜ್ಯಾದ್ಯಂತ ವಿಶೇಷ ಜನಮನ್ನಣೆ ಗಳಿಸುತ್ತಾ ಇದೆ. ಇದಕ್ಕೆ ಕಾರಣ ಪ್ರತಿಯೊಬ್ಬ ಕಾರ್ಯಕರ್ತನ ನಿಸ್ವಾರ್ಥ ಸೇವೆ." ಹೇಳಿದ ಮಾತು ಬಹಳವಾಗಿ ತಟ್ಟಿತು. ನಿಸ್ವಾರ್ಥ ಎನ್ನುವುದು ಪ್ರಾಮಾಣಿಕವಾಗಿದ್ದಾಗ ಪಾರದರ್ಶಕವಾಗಿದ್ದಾಗ ಗೆಲುವು ನಿಶ್ಚಿತ. ಯಾವುದೇ ಕೆಲಸಗಳನ್ನು ಪ್ರತಿಫಲಾಪೇಕ್ಷೆಗಳಿಲ್ಲದೆ ಮಾಡಿದಾಗ ಹೆಸರು ಮತ್ತು ಕೀರ್ತಿ ತಂತಾನೆ ದೊರೆಯುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾದ ವಿಚಾರ.
ಯಾವುದೇ ವಿಶೇಷ ಸಾಧನೆಗೈಯ್ಯದೆ, ತುಂಬಾ ಶ್ರಮಪಡದೆ, ಹೆಸರು ಮತ್ತು ಕೀರ್ತಿಗಾಗಿ ಬಯಸುವವರ ಮಧ್ಯ ಇಂತಹ ನಿಸ್ವಾರ್ಥ ಮನಸ್ಸುಗಳು ಬಹಳ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂತಹ ವ್ಯಕ್ತಿಗಳನ್ನು, ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಬದಲಾವಣೆಗಳಿಗೆ ಪ್ರೇರಕರಾಗೋಣ... ನಮಸ್ಕಾರ
: