-->
ಪ್ರೀತಿಯ ಪುಸ್ತಕ : ಸಂಚಿಕೆ - 92

ಪ್ರೀತಿಯ ಪುಸ್ತಕ : ಸಂಚಿಕೆ - 92

ಪ್ರೀತಿಯ ಪುಸ್ತಕ
ಸಂಚಿಕೆ - 92
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 


                     ಧನಿಯರ ಸತ್ಯನಾರಾಯಣ
     ಪ್ರೀತಿಯ ಮಕ್ಕಳೇ..... ಹರಕು ಅಂಗಿ ತೊಟ್ಟ ಆರು ವರುಷದ ಹುಡುಗ ಬಾಳೆಯ ಪುಟ್ಟ ಗಿಡವನ್ನು ಹೊರಲಾರದೆ ಹೊತ್ತು ಕೊಂಡು ಬರುತ್ತಿದ್ದಾನೆ. ನಡು ನಡುವೆ ಅವನ ಪುಟ್ಟ ತಂಗಿ ತಾನೂ ಸ್ವಲ್ಪ ದೂರ ಹೊತ್ತುಕೊಳ್ಳುತ್ತಾಳೆ. ಇಬ್ಬರೂ ಸೇರಿ ತಮ್ಮ ಅಜ್ಜಿ ಮನೆಯಲ್ಲಿ ಕೊಟ್ಟ ರಸಬಾಳೆಯ ಗಿಡವನ್ನು ಮನೆಗೆ ತಲುಪಿಸುತ್ತಾರೆ. ಅವರು ಯಾವತ್ತೂ ಬಾಳೆಗೊನೆಯನ್ನು ತಮ್ಮ ಮನೆಯಲ್ಲಿ ಕಂಡವರಲ್ಲ. ಈಗೊಂದು ಕನಸು. ತಾವೇ ಬೆಳೆಸಿದ ಗಿಡದ ಹಣ್ಣು ತಿನ್ನುವ ಕನಸು. ಅವರಿಗೆ ಸ್ವಂತ ಜಾಗ ಇಲ್ಲ. ಶ್ರೀಮಂತನಾದ ಕೋಟೆ ಮನೆ ನಾಗಪ್ಪನವರ ತೆಂಗಿನ ಪಾಳು ತೋಟದಲ್ಲಿ ಸಣ್ಣ ಗುಡಿಸಲು ಕಟ್ಟಿ ವಾಸಿಸುತ್ತಿದ್ದರು. ಇಂತಹ ಸ್ಥಿತಿಯಲ್ಲಿ ಈ ಮಕ್ಕಳು ಗಿಡ ನೆಟ್ಟು, ಬೆಳೆಸಿ ಅದರಲ್ಲಿ ಹಣ್ಣು ಆಗುವ ಹೊತ್ತಿಗೆ ಏನಾಯಿತು ಎಂದು ತಿಳಿದುಕೊಳ್ಳಲು ಪುಸ್ತಕ ಓದಿ. ನಾವೇ ನೆಟ್ಟು ಬೆಳೆಸುವ ಗಿಡದ ಮೇಲೆ ನಮಗೆ ಯಾವ ರೀತಿಯ ಪ್ರೀತಿ ಇರಬಹುದು ನಿಮಗೆ ಗೊತ್ತೇ? 
ಲೇಖಕರು: ಕೊರಡ್ಕಲ್ ಶ್ರೀನಿವಾಸ ರಾವ್ 
ರೂಪಾಂತರ: ಲಿಂಗದೇವರು ಹಳೆಮನೆ
ಚಿತ್ರಗಳು: ಭೀಮರಾವ್ ಮುರಗೋಡ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718) 
ಬೆಲೆ: ರೂ.9/- (ಇದು ಹಳೆಯ ಪ್ರತಿ, ಈಗಿನ ಬೆಲೆ ವ್ಯತ್ಯಾಸ ಇರಬಹುದು) 
5ನೇ 6ನೇ ತರಗತಿಯವರು ಓದಿಕೊಳ್ಳಬಹುದು.  
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article