-->
ಪ್ರೀತಿಯ ಪುಸ್ತಕ : ಸಂಚಿಕೆ - 70

ಪ್ರೀತಿಯ ಪುಸ್ತಕ : ಸಂಚಿಕೆ - 70

ಪ್ರೀತಿಯ ಪುಸ್ತಕ
ಸಂಚಿಕೆ - 70
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 
                           ಗಣಿತ ಕಲಿತ ಗಿಣಿ
      ಪ್ರೀತಿಯ ಮಕ್ಕಳೇ..... ಒಂದು ಜೇನು ನೊಣ ಮತ್ತು ಒಂದು ಗಿಣಿಗೆ ಪರಿಚಯವಾಗುತ್ತದೆ. ಜೇನು ನೊಣಕ್ಕೆ ಮಕರಂದ ಹೀರಲು ಹೂವು ಬೇಕಾಗಿದೆ. ಗಿಣಿ ಹೂವು ತೋರಿಸಲು ಕರೆದೊಯ್ಯುತ್ತದೆ. ಆ ಹೊತ್ತಿನಲ್ಲಿ ಇಬ್ಬರ ನಡುವಿನ ಮಾತುಕತೆಯ ಮೂಲಕ ಜೇನು ಸಂಗ್ರಹದ ಕಥೆಯನ್ನು ಇಲ್ಲಿ ವಿವರಿಸಲಾಗಿದೆ. ಕೊನೆಯಲ್ಲಿ ಜೇನು ನೊಣ ತಾನು ಕಟ್ಟುವ ಜೇನುಗೂಡಿನ ಸುದ್ದಿ ಗಿಣಿಗೆ ಬಹಳ ವಿಶೇಷವಾಗಿ ಕಾಣುತ್ತದೆ. ಷಟ್ಕೋನದಲ್ಲಿ ಗೂಡು ಕಟ್ಟಿರುವುದು ಯಾಕೆ, ವೃತ್ತ, ತ್ರಿಭುಜ, ಚತುರ್ಭುಜದಲ್ಲಿ ಯಾಕೆ ಗೂಡು ಕಟ್ಟಿಲ್ಲ ಎಂಬ ಪ್ರಶ್ನೆಗೆ ಜೇನುನೊಣ ಏನು ಉತ್ತರ ಕೊಡುತ್ತದೆ? ಊಹಿಸಬಲ್ಲಿರಾ? ಪ್ರಯತ್ನ ಮಾಡಿ. ಮತ್ತೆ ಪುಸ್ತಕ ಓದಿ ನೋಡಿ. ಗಣಿತದ ಬಗ್ಗೆ ಒಂದು ಆಸಕ್ತಿದಾಯಕ ಅಂಶ ಇದರಿಂದ ತಿಳಿಯಬಹುದು. ಓದಿ ನೋಡಿ. 
ಪ್ರಕಾಶಕರು: ನವಕರ್ನಾಟಕ ಪ್ರಕಾಶನ 
ಲೇಖಕರು: ಹೂರ್ ಬಾನು
ಚಿತ್ರಗಳು: ಮೋಹನ್ ಎಂ  
ಬೆಲೆ: ರೂ.60/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article