-->
ಕವನ ರಚನೆ : ಜಯಪ್ರದ, 10ನೇ ತರಗತಿ

ಕವನ ರಚನೆ : ಜಯಪ್ರದ, 10ನೇ ತರಗತಿ

ಕವನ ರಚನೆ : ಜಯಪ್ರದ
10ನೇ ತರಗತಿ 
ಯಸ್.ವಿ.ವಿ.ಯಚ್.ಯಸ್. ಮೀಯಪದವು.
ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ                      
               
         ಹಚ್ಚ ಹಸಿರಿನ ಈ ಪ್ರಕೃತಿಯಲ್ಲಿ
      ಗಿಡ ಮರಗಳಿಗಿಲ್ಲ ಯಾವುದೇ ಆಕೃತಿ|
      ವರ್ಣಿಸಬಹುದು ಸಾವಿರ ಕೃತಿಯಲ್ಲಿ
      ಸುಸಮೃದ್ಧವಾದ ನಮ್ಮ ಸಂಸ್ಕೃತಿ| 
ಮರ ಗಿಡಗಳೆಲ್ಲ ಹಸಿರಸಿರು
ಇವಿಲ್ಲದಿದ್ದರೆ ನಿಲ್ಲುವುದು ನಮ್ಮ ಉಸಿರು|
ಗಾಳಿ ಬೀಸಿ ಮೋಡಮುಸುಕಿ 
ಬಂದರೆ ಮಳೆ ನೀರು....
ಬೆಳೆ ಬೆಳೆದ ರೈತನು 
ಖುಷಿಯಿಂದ ಬಿಡುವನು ನಿಟ್ಟುಸಿರು|
       ಬೆಳೆದು ನಿಂತ ಹಸಿರಿನ ವನ 
       ಆಗಿದೆ ಪ್ರಾಣಿಪಕ್ಷಿಗಳ ವಾಸಸ್ಥಾನ
       ದಯವಿಟ್ಟು ಮನುಜ ಕಡಿಯಬೇಡ 
        ನಮ್ಮ ಪರಿಸರದ ಗಿಡಮರಗಳ|
        ಪ್ರಕೃತಿ ನೀಡುತ್ತದೆ ಸಿಹಿ ಸಿಹಿಯಾದ ಹಣ್ಣು
        ಪ್ರಕೃತಿ ವೀಕ್ಷಣೆಗೆ ಸಾಲದು ಎರಡು ಕಣ್ಣು|
ಪ್ರಕೃತಿದತ್ತವಾದ ಶುದ್ಧ, ವಾಯು, ಜಲ, ಮಣ್ಣು
ಹಿತಮಿತವಾಗಿ ಉಪಯೋಗಿಸಬೇಕು ಇದನಿನ್ನು|
ನಮ್ಮ ಪ್ರಕೃತಿಯೇ ಚಿನ್ನದಗಣಿ
ಈ ಪ್ರಕೃತಿಗೆ ನಾನೆಂದಿಗೂ ಚಿರಋಣಿ|   
        ಹಸಿರಿದ್ದರೆಯೇ ಉಸಿರು
        ಉಸಿರಿದ್ದರೆಯೇ ಹೆಸರು| 
 ............................................... ಜಯಪ್ರದ
10ನೇ ತರಗತಿ 
ಯಸ್.ವಿ.ವಿ.ಯಚ್.ಯಸ್. ಮೀಯಪದವು.
ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ
*******************************************

Ads on article

Advertise in articles 1

advertising articles 2

Advertise under the article