
ಮಳೆರಾಯ - ಕವನ
Wednesday, June 23, 2021
Edit
ಲಹರಿ ಜಿ.ಕೆ. 7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಳೆರಾಯ
----------------
ಗುಡುಗು ಮಿಂಚು ಅಂದರೆ ಭಯ,
ಆದರೂ ಬರಲೇಬೇಕು ನೀ ಮಳೆರಾಯ,
ಈ ಭೂಮಿಯ ತಂಪಾಗಿಸಲು;
ನೀನಿಲ್ಲದಿರೆ ನಾವಿಲ್ಲ,
ನೀನಿಲ್ಲದಿರೆ ಬಾಳಿಲ್ಲ,
ನೀನಿಲ್ಲದಿರೆ ಈ ಧರೆಯೂ
ಬರಡೂ.....ಬರಡೂ....
ಸಸ್ಯಸಂಕುಲಕೆ ನೀ ವರವು,
ನೀನಿದ್ದರೆ ಅವುಗಳು ಹಚ್ಚಹಸಿರು,
ನೀ ಮುನಿದರೆ ಮಾತ್ರ ಎಲ್ಲವೂ,
ನಾಶವೋ....ನಾಶ.....
ಕೈ ಮುಗಿಯುವೆವು ನಾವುಗಳು,
ನೀ ಮುನಿಯದೆ ಭೂಮಿಗೆ ಬಂದುಬಿಡು,
ಈ ಭೂಮಿಯ ತಂಪಾಗಿಸಲು.....
..............ಲಹರಿ ಜಿ.ಕೆ. 7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ