-->
 ಹಸಿರು ಯೋಧರು - 25

ಹಸಿರು ಯೋಧರು - 25

ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ  ಹಸಿರ ಲೇಖನ ಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು




ಸಮೃದ್ಧ್. ಕೆ  3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
 ಗಿಡದ ಹೆಸರು ; ಮಾವಿನಗಿಡ 
      ನಾನು ನೆಟ್ಟ ಮಾವಿನಗಿಡ ದೊಡ್ಡದಾದ ನಂತರ ಚಿಗುರೊಡೆದು ದೊಡ್ಡ ಮರವಾಗುತ್ತದೆ. ವಸಂತಕಾಲದಲ್ಲಿ ರುಚಿರುಚಿಯಾದ ಮಾವಿನ ಹಣ್ಣುಗಳನ್ನು ಕೊಡುತ್ತದೆ. ಈ ಮರದಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿ ವಾಸಿಸತೊಡಗುತ್ತವೆ. ನಮಗೆ ಧಾರಾಳ ಆಮ್ಲಜನಕ ಮತ್ತು ನೆರಳು ಕೊಡುತ್ತದೆ. ಹೂ ಮತ್ತು ತೊಗಟೆಗಳನ್ನು ಔಷಧವಾಗಿಯೂ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಮಾವಿನ ಎಲೆಗಳನ್ನು ಉಪಯೋಗಿಸಿ ಹಲ್ಲು ಉಜ್ಜುತ್ತಿದ್ದರು. ಮಾವಿನ ಹಣ್ಣಿನಿಂದ ವಿವಿಧ ಪಾನೀಯಗಳನ್ನು ಮತ್ತು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಇದರ ಹಣ್ಣಿನ ಸೇವನೆಯು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. 




ಶರಣ್ಯಾ. ಪಿ. ಬಿ.  10ನೇ ತರಗತಿ.
ಆನಂದಾಶ್ರಮ ಹೈಸ್ಕೂಲ್ ಸೋಮೇಶ್ವರ.
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವು ಗಿಡ





ಸುದಿಕ್ಷ ಎಸ್. ಭಟ್ 4 ನೇ ತರಗತಿ
ವಿವೇಕಾನಂದ ಸಿಬಿಎಸ್ಇ ಸ್ಕೂಲ್ ಪುತ್ತೂರು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸುರಿನಮ್ ಚೆರ್ರಿ




ರೋಲ್ವಿಯಾ ರೆಬೆಲ್ಲೋ 9ನೇ ತರಗತಿ 
ಐಡಿಯಲ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಎಡಪದವು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣ ಫಲ



ಸೌಮ್ಯ    6 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು:  ಮಾವಿನ ಹಣ್ಣಿನ ಗಿಡ



   ಹರ್ಮುಖಿ      9 ನೇ ತರಗತಿ
ಸರಕಾರಿ ಪ್ರೌಢಶಾಲೆ ಸರ್ವೆ. ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ರಕ್ತಚಂದನ 
       ಇದು ಒಂದು ಮರವಾಗಿ ಬೆಳೆಯುವ ಸಸ್ಯ.  ಇದು ತುಂಬಾ ಔಷಧಿಯ ಗುಣವನ್ನು ಹೊಂದಿದೆ. ಪಿತ್ತ , ಕಣ್ಣುರಿ, ಕೈಯಲ್ಲಿ ಬೆವರು ಇಂತಹ ಕಾಯಿಲೆಗಳಿಗೆ ರಕ್ತಚಂದನದ ಕಷಾಯ ಸೇವಿಸಬೇಕು.
ಜೀರ್ಣನಾಳದ ಸಮಸ್ಯೆ ಕೆಮ್ಮು ನಿವಾರಣೆ ಮತ್ತು ರಕ್ತ ಶುದ್ಧೀಕರಣದಲ್ಲಿ ಸಹಾಯಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.  ಇದನ್ನು ಸಾಬೂನು ತಯಾರಿಕೆಯಲ್ಲಿ ಬಳಸುತ್ತಾರೆ.



ಶ್ರೇಯಾ ಹೆಗಡೆ.    7 ತರಗತಿ
ಲೂರ್ಡ್ಸ ಸೆಂಟ್ರಲ್ ಸ್ಕೂಲ್.ಬಿಜೈ.ಮಂಗಳೂರು.ದ.ಕ.
ಗಿಡದ ಹೆಸರು : ಸಸ್ಯ ಶುಂಠಿ
     "ಈ ಶುಂಠಿಯನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಸಾಂಬಾರ ಪದಾರ್ಥವಾಗಿ ಹಾಗೂ ಔಷಧೀಯ ಘಟಕವಾಗಿ ಬಳಸುತ್ತಾರೆ. ರೈಝೋಮ್ ಎಂದು ಕರೆಯಲ್ಪಡುವ ಭೂಮಿಯ ಒಳಗಿರುವ ಸುಳ್ಳು ಕಾಂಡವೇ ಶುಂಠಿಯ ಪ್ರಯೋಜನಕಾರಿ ಭಾಗ. ಆಯುರ್ವೇದ ಔಷಧದಲ್ಲಿ, ಸೋಡಾ ತಯಾರಿಕೆಯಲ್ಲಿ, ಮನೆಮದ್ದಿನಲ್ಲಿ, ಕ್ಯಾಂಡಿ ತಯಾರಿಕೆಯಲ್ಲಿ, ಉಪ್ಪಿನಕಾಯಿ ತಯಾರಿಕೆಯಲ್ಲಿ, ಇದನ್ನು ಅತಿ ಹೆಚ್ಚು ಬಳಸುತ್ತಾರೆ. ಹೆಚ್ಚಿನ ನೀರಿನ ಅಂಶದೊಂದಿಗೆ ಕಾರ್ಬೋಹೈಡ್ರೇಟ್, ಪ್ರೊಟೀನ್ ಪೋಷಕಾಂಶವನ್ನು ಇದು ಹೊಂದಿದೆ. 



ವರ್ಷಿಣಿ   10ನೇ ತರಗತಿ 
ಎಸ್.ವಿ.ಎಸ್. ದೇವಳ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಗೇರು ಬೀಜದ ಗಿಡ



ತನ್ವಿತಾ. ಎ. 3 ನೇ ತರಗತಿ 
ಜನತಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕ ಕಾಸರಗೋಡು ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ



ವೀಕ್ಷಾ  2ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 

ಗಿಡದ ಹೆಸರು : ತುಳಸಿ ಗಿಡ
      ತುಳಸಿ ಗಿಡದ ಎಲೆಗಳಿಂದ ತಯಾರಿಸಿ‌ದ ಹಾರ ದೇವರ ಪೂಜೆಗೆ ಬಳಕೆಯಾಗುತ್ತದೆ. ದೇವಸ್ಥಾನದಲ್ಲಿ ನೀಡುವ ತೀರ್ಥದಲ್ಲಿ ತುಳಸಿಯನ್ನು ಬಳಸುತ್ತಾರೆ. ತುಳಸಿ ಗಿಡವು ಆಮ್ಲಜನಕ ಉತ್ಪನ್ನ ಮಾಡುತ್ತದೆ. ತುಳಸಿಯನ್ನು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.




ಶ್ರೀನಿಕಾ  ಎಲ್. ಕೆ. ಜಿ. 
ಅವೆ ಮರಿಯ ಲಿಟ್ಲ್ ಎಂಜಲ್ಸ್ ಪ್ರಿ - ಪ್ರೈಮರಿ ಸ್ಕೂಲ್ ಪಜೀರ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ



  ಮಹಿಮ್ ಎಸ್ ಶೆಟ್ಟಿ
  ಲೋರೆಟ್ಟೋ ಆಂಗ್ಲ ಮಾಧ್ಯಮ ಶಾಲೆ. ಬಂಟ್ವಾಳ.
  ದಕ್ಷಿಣ ಕನ್ನಡ ಜಿಲ್ಲೆ
  ಗಿಡದ ಹೆಸರು :ಬಾಳೆಗಿಡ


Ads on article

Advertise in articles 1

advertising articles 2

Advertise under the article