
ಮೂರು ಕವನಗಳು
Wednesday, March 3, 2021
Edit
ಉಮಾವತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
..............ಮೂರು ಕವನಗಳು............
ನಟನೆ
ನಗು ತುಂಬಿರೊ ಮೊಗದಲಿ
ಮಂದಹಾಸದ ಸುಳಿವಿಲ್ಲ....!!
ಬಣ್ಣಗಳೇ ತುಂಬಿರುವ ಈ ಲೋಕದ
ಹಲವರ ಬದುಕಿನಲ್ಲಿ ನಗು ಚೆಲ್ಲುವ
ಬಣ್ಣಗಳಿಲ್ಲ....!!
ಸಂತೋಷವಿರದ ಬದುಕಿನಲ್ಲಿ
ಖುಷಿ ಇರುವ ಹಾಗೆ ನಟಿಸಿ
ಬದುಕುವವರೆ ಎಲ್ಲಾ.....!!!!
*************************
ವರುಣನ ಆರ್ಭಟ
ಶಾಂತವಾಗಿತ್ತು ನಿನ್ನ ಮನ
ಆ ಮನವನ್ನು ಕಲಕಿ ತಪ್ಪು ಮಾಡಿದರಲ್ಲ...!
ನಿನ್ನ ಈ ಆರ್ಭಟ ರೌದ್ರಾವತಾರಕ್ಕೆ
ಬಲಿಯಾದವರಲ್ಲಿ ಲೆಕ್ಕವಿಲ್ಲ...!!!
ಯಾರು ಎಷ್ಟೇ ಕೇಳಿಕೊಂಡರು ಕೂಡ
ಯಾಕೆ ನಿನ್ನ ಮನ ಶಾಂತಗೊಳ್ಳಲಿಲ್ಲ
ಅಷ್ಟೊಂದು ನೋವು ಮಾಡಿದರೆ??
ನೀನು ಶಾಂತಗೊಳ್ಳುವಷ್ಟರಲ್ಲಿ
ಅದೆಷ್ಟೋ ಜನ - ಮನ ಅನಾಥವಾಗಿದೆ
ಅದಕ್ಕೆ ಪರಿಹಾರ ನಿನ್ನಿಂದ ಕೊಡಲಾಗುವುದೇ..!!
ನಿನ್ನಡೆಗೆ ಕರಿಸಿಕೊಂಡವರನ್ನು
ನಾನಿರುವೆಡೆಗೆ ಕಳುಹಿಸಿಕೊಡಬಲ್ಲೇಯಾ
ಸಾಧ್ಯನಾ ಗೆಳೆಯ??
ಈಗ ಮತ್ತೆ ಶಾಂತವಾಗಿರುವೆ
ಯಾರು ಏನು ಮಾಡಬಹುದೆಂದು
ನೋಡುತ್ತಿರುವೆಯಾ ಅಥವಾ ಅವರ
ತಪ್ಪುಗಳನ್ನು ಲೆಕ್ಕ ಹಾಕುತ್ತಿರುವೆಯಾ??
************************************
ಮಕ್ಕಳು
ಮಕ್ಕಳಿಗೆಲ್ಲೂ ಭೇದ ಇಲ್ಲ
ಮಕ್ಕಳ ಸ್ವಭಾವ ಅರಿತಿರಿ ಎಲ್ಲಾ
ಅವರ ಪುಟ್ಟ ಕೈಕಾಲು
ನಿಲ್ಲುವುದಿಲ್ಲ ಎಲ್ಲೂ....!!
ಸಿಹಿ ತಿಂಡಿ ಅವರಿಗೆ ಇಷ್ಟ
ಆಟಿಕೆ ಇಲ್ಲದಿದ್ದರೆ ತುಂಬಾ ಕಷ್ಟ
ಅಳುತ್ತಾರೆ ಎಲ್ಲರ ಮುಂದು
ನಗುತ್ತಾರೆ ಎಂದೆಂದೂ...!!
.......................ಉಮಾವತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು