ಪ್ರೀತಿಯ ಪುಸ್ತಕ : ಸಂಚಿಕೆ - 156
Friday, March 28, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 156
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಪ್ರಾಣಿಗಳ ಜೊತೆಗೆ ಗೆಳೆತನ ನಿಮಗೆ ಪ್ರಿಯವಾದ ವಿಚಾರವೇ? ಹಾಗಿದ್ದರೆ ನಿಮಗೆ ಈ ಪುಸ್ತಕವೂ ಇಷ್ಟವಾಗುತ್ತದೆ. ಪುಟ್ಟ ಪುಟ್ಟ ಮುದ್ದು ಮುದ್ದು ಪ್ರಾಣಿಗಳನ್ನು ಕಂಡರೆ ನಮಗೆ ದೂರದಿಂದ ನೋಡಿ ಖುಶಿಪಟ್ಟರೆ ಸಾಕಾಗುವುದಿಲ್ಲ. ಅದನ್ನು ನಮ್ಮ ಹತ್ತಿರವೇ ಇಟ್ಟುಕೊಳ್ಳಬೇಕು ಅನಿಸುತ್ತದೆ. ಈ ಶಶಾಂಕನಿಗೂ ಹಾಗೆಯೇ ಆಯಿತು. ಚುರುಕಾಗಿ ಓಡಾಡುತ್ತಿದ್ದ ಅಳಿಲನ್ನು ಅದರ ಗುಂಪಿನಿಂದ ಬೇರ್ಪಡಿಸಿ ತನ್ನ ಮನೆಗೆ ತಂದು ಇರಿಸಿಕೊಂಡ. ಅದರ ಜೊತೆಗೆ ಆಟವಾಡಿದ. ಬೇಕಾದ್ದು ತಿನ್ನಿಸಿದ. ಆದರೆ ಅಳಿಲು ಮಾತ್ರ ದಿನೇ ದಿನೇ ಮಂಕಾಗುತ್ತಾ ಹೋಯಿತು. ಅರೆ, ಇಷ್ಟು ಅಕ್ಕರೆಯಿಂದ ನೋಡಿಕೊಂಡರೂ ಅಳಿಲು ಯಾಕೆ ಮಂಕಾಯಿತು? ಅದಕ್ಕೆ ಏನು ಬೇಕಾಗಿತ್ತು? ಶಶಾಂಕನಿಗೆ ಅಳಿಲಿನ ಸಂಕಟ ಅರ್ಥವಾಯಿತೇ? ಆಮೇಲೆ ಅವನು ಏನು ಮಾಡಿದ? ಓದಿ ನೋಡಿ. ಹಾಗೇನೇ ನೀವು ಇಷ್ಟ ಪಡುವ ಪ್ರಾಣಿಯ ಬಗ್ಗೆಯೂ ಯೋಚಿಸಿ, ನಿಮ್ಮದೇ ಕಥೆ ಬರೆಯಿರಿ.
ಲೇಖಕರು: ಪ.ನಾ.ಹಳ್ಳಿ ಹರೀಶ್ ಕುಮಾರ್
ಚಿತ್ರಗಳು: ಶೈಲಜಾ ಎಸ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು
ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************